ಪೋಸ್ಟ್‌ಗಳು

ಫೆಬ್ರವರಿ, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜಿ ವಿ ಅತ್ರಿಯ ನೆನಪಿನಲ್ಲಿ...

ಇಮೇಜ್
ಗಣೇಶ ವಿಜಯ್ ಕುಮಾರ್ ಅತ್ರಿ ಎನ್ನುವ ಹೆಸರನ್ನು ಕೇಳಿದವರು ಅಷ್ಟೊಂದು ಇರಲಿಕ್ಕಿಲ್ಲ. ಆದರೆ ಅದೇ ಹೆಸರನ್ನೇ ಚಿಕ್ಕದಾಗಿ 'ಜಿ ವಿ ಅತ್ರಿ' ಅಂದ ತಕ್ಷಣ ಕನ್ನಡ ನಾಡಿನ ಸಂಗೀತ ಪ್ರೇಮಿಗಳ ಕಣ್ಮುಂದೆ ಎತ್ತರದ ನಿಲುವಿನ, ಹೊಳೆಯುವ ಕಂಗಳ,  ನಗುಮುಖದ ಆ ಯುವಕನ ಚಿತ್ರ ಹಾದು ಹೋಗುತ್ತದೆ.  ಅತ್ರಿಯವರ ಮಧುರ ಕಂಠದಿಂದ ಮೂಡಿಬಂದ ಹಾಡುಗಳೆಷ್ಟೋ ಕಿವಿಯಲ್ಲಿ ಅನುರಣನಗೊಳ್ಳುತ್ತವೆ.       1964ರ ಮೇ 21ರಂದು ಜನಿಸಿದ ಅತ್ರಿ ಈಗ ನಮ್ಮೊಡನೆ ಇದ್ದಿದ್ದರೆ 53 ವರ್ಷದವರಾಗಿರುತ್ತಿದ್ದರು.  ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿಹೊಂದಿದ್ದ ಅತ್ರಿ ಸಂಗೀತ ಕ್ಷೇತ್ರದಲ್ಲಿ ಮಿಂಚಿನಂತೆ ಬಂದು ಮರೆಯಾಗಿ ಹೋದವರು.  2000ನೇ ಇಸವಿಯ ಎಪ್ರಿಲ್ 30ರಂದು ಶೃಂಗೇರಿಯಲ್ಲಿ ತುಂಗಾ ನದಿಯಲ್ಲಿ ಸ್ನಾನಮಾಡುವಾಗ ನಡೆದ ದುರಂತದಲ್ಲಿ ಅತ್ರಿ ಪತ್ನಿ ಹಾಗೂ ಪುತ್ರ ಸೇರಿದಂತೆ  ಕುಟುಂಬದ ಐದು ಜನ ಸದಸ್ಯರೊಂದಿಗೆ ಮುಳುಗಿ ಅಸುನೀಗಿದರು. ಈ ದುರಂತ ಸಂಭವಿಸುವಾಗ ಅವರಿಗಿನ್ನೂ 36ರ ಎಳೆ ವಯಸ್ಸು.  ಆದರೆ ಆ ಹೊತ್ತಿಗಾಗಲೇ ಅತ್ರಿಯವರ 200ಕ್ಕೂ ಹೆಚ್ಚು  ಆಡಿಯೋ ಕೆಸೆಟ್ಗಳು ಬಿಡುಗಡೆಯಾಗಿದ್ದವೆಂದರೆ ಅವರು ಅದಿನ್ನೆಂತಹ ಪ್ರತಿಭೆಯಾಗಿದ್ದರು! ಸಂಗೀತ ಜಗತ್ತಿಗಾದ ನಷ್ಟ ಅದಿನ್ನೆಂತದ್ದು!!   ಬೆಂಗಳೂರಿನ ಶೇಷಾದ್ರಿ ಗವಾಯಿಯವರಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಅಭ್ಯಸಿಸಿದ್ದ ಅತ್ರಿ ಸುಗಮ ಸಂಗೀತದ ಕ್ಷೇತ್ರದ ಕಡೆ ವಿಶೇಷ ಗಮನ ಹರಿಸಿದ್ದರು. ತಮ್ಮ ಧ್ವನಿಯ