ಪೋಸ್ಟ್‌ಗಳು

2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಳೆದು ಹೋಗದಂತೆ.

24ನೇ ತಾರೀಕು ಅಯೋಧ್ಯೆಯ ವಿವಾದದ ಬಗ್ಗೆ ಅಲಹಾಬಾದ್ ನ್ಯಾಯಾಲಯ ತನ್ನ ತೀರ್ಪನ್ನು ನೀಡಲಿದೆ. ಅರವತ್ತು ವರ್ಷಗಳಷ್ಟು ಹಿಂದಿನ ವಿವಾದವೊಂದು ಇಡೀ ಭಾರತವನ್ನೆ ತನ್ನತ್ತ ಸೆಳೆಯುತ್ತಿದೆ. ತೀಪರ್ು ಯಾರ ಕಡೆಗೆ ಬರಬಹುದು ಎನ್ನುವ ಕುತೂಹಲಕ್ಕಿಂತ, ಏನೇ ತೀಪರ್ು ಬಂದರೂ ಹಿಇಂಸಾಚಾರ ತಪ್ಪಿದ್ದಲ್ಲ ಎನ್ನುವ ಸತ್ಯ ಜನರನ್ನು ಚಿಂತಿತರನ್ನಾಗಿಸಿದೆ. ಭಾರತದ ಸುಪ್ರಸಿದ್ದ ಮಹಾಕಾವ್ಯ ರಾಮಾಯಣದ ಕೇಂದ್ರಬಿಂಧು ಶ್ರೀ ರಾಮನ ಜನ್ಮಸ್ಥಳ ಅಯೋಧ್ಯೆ. ಆ ಅಯೊಧ್ಯೆಯಲ್ಲಿ ಶ್ರೀ ರಾಮಮಂದಿರವೊಂದಿತ್ತು. ಕಾಲಾನಂತರ ಮುಘಲ್ ದೊರೆ ಬಾಬರ್, ಮುಸ್ಲಿಂ ಫಕೀರನೊಬ್ಬನ ಆಸೆಯಂತೆ ಆ ಮಂದಿರವನ್ನು ನಾಶ ಮಾಡಿ, ಅಲ್ಲಿ ಮಸೀದಿಯೊಂದನ್ನು ನಿಮರ್ಿಸಿದ. ಆ ಜಾಡಿನಲ್ಲೆ ಸಾಗಿ ಡಿಸೆಂಬರ್-1992ರಲ್ಲಿ ಕಾರಸೇವಕರು ಆ ಬಾಬರೀ ಮಸೀದಿಯನ್ನು ಧ್ವಂಸಗೊಳಿಸಿದ. ಇದು ಇಲ್ಲಿಯವರೆಗೆ ತಿಲಿದಿರುವ ಸಂಕ್ಷಿಪ್ತ ಇತಿಹಾಸ. ನನಗನ್ನಿಸುತ್ತದೆ, ವಂಶವಾಹಿಗಳ ಮೂಲಕ ಸಾಮುದಾಯಿಕ ಭಾವನೆಗಳೂ ತಲೆಮಾರಿನಿಂದ ತಲೆಮಾರಿಗೆ ವಗರ್ಾವಣೆಯಾಗುತ್ತದೆ.ಬಾಬರ್ನ ಕೃತ್ಯದ ಪರಿಣಾಮವಾಗಿ ಜನರಲ್ಲಿ ಹುಟ್ಟಿದ ದ್ವೇಷ ಐದುನೋರು ವರ್ಷಗಳ ನಂತರ ಮಸೀದಿಯ ಧಂಸಕ್ಕೆ ಕಾರಣವಾಯಿತು. ಹಾಗೆಯೇ ಮಸೀಧಿ ಧ್ವಂಸದ ಪರಿಣಾಮ ಇನ್ನೆಲ್ಲಿಗೆ ಸಾಗುತ್ತದೆ? ಇನ್ನೊಂದು ದಿನ ಅದು ವ್ಯಕ್ತಗೊಳ್ಳಲೇಬೇಕು. ಇನ್ನೊಂದು ದಿನ ಅದು ವ್ಯಕ್ತಗೊಳ್ಳುವುದು ಧ್ವಂಸ ಮಾಡುವ ಮೂಲಕವೆ. ಇಂತಹ ಅರ್ಥಹೀನ

ದೇಶವಲ್ಲ, ಮಾತೆ ಆಗಬೇಕು

ಇಮೇಜ್
             ಯಾವ ದೇಶದಲ್ಲಿ ಹಿಂದಿನ ತಲೆಮಾರಿನವರ ಸಂಸ್ಮರಣೆ ಇರುವುದಿಲ್ಲವೋ, ಆ ದೇಶದಲ್ಲಿ ವರ್ತಮಾನವೂ,ಭವಿಷ್ಯವೂ ಆಶಾದಾಯಕವಾಗಿರುವುದಿಲ್ಲ. ಏಕೆಂದರೆ ಅವರು ಪಡೆದುಕೊಂಡಿರುವುದೆಲ್ಲ ತಮ್ಮ ಹಿಂದಿನ ತಲೆಮಾರಿನವರು ನೀಡಿರುವುದನ್ನೆ. ಈಮಾತು ನಮ್ಮ ದೇಶಕ್ಕೂ ಅನ್ವಯಿಸುತ್ತದೆ. 9ನೇ ತರಗತಿಯ ಇಂಗ್ಲಿಷ್ ಪುಸ್ತಕದಲ್ಲಿ Little Martyr ಎಂಬ ಪಾಠ ಇದೆ. ಹುಬ್ಬಳ್ಳಿಯ ನಾರಾಯಣ ಮಹಾದೇವ ಢೋಣಿ ಎನ್ನುವ 13ವರ್ಷದ ಹುಡುಗನೊಬ್ಬ,"ಕ್ವಿಟ್ ಇಂಡಿಯಾ" ಚಳುವಳಿಯ ಸಮಯದಲ್ಲಿ ಬ್ರಿಟೀಷರ ಗುಂಡಿಗೆ ಬಲಿಯಾದ ಕರುಣಾಜನಕ ಕಥೆ ಅದು. ನಮ್ಮ ದೇಶ ಸ್ವಾತಂತ್ರಕ್ಕಾಗಿ ನಡೆಸಿದ ಸುದೀರ್ಘ ಹೋರಾಟದಲ್ಲಿ ಇಂತಹ ಅದೆಷ್ಟು ಅಮಾಯಕರು ಪ್ರಾಣ ನೀಡಿರಬಹುದು? ಲೆಕ್ಕ ಇದೆಯೆ? ಸ್ವಾತಂತ್ರ್ಯ ಹೋರಾಟದ ನಂತರದ ದಿನಗಳಲ್ಲಿ ಭೂಮಿಯ ಮೇಲಿರುವ ನಮಗೆ, ಆ ದಿನಗಳಲ್ಲಿ ನಮ್ಮ ಹಿರಿಯರು ಅನುಭವಿಸಿದ ಕಷ್ಟಕೋಟಲೆಗಳ, ನೋವಿನ ಮಹತ್ವದ ಕಿಂಚಿತ್ತಾದರೂ ಅರಿವು ಇದೆಯ? ಇವತ್ತಿನ ಪರಿಸ್ತಿತಿಯನ್ನು ಗಮನಿಸಿದಾಗ ಈ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.                  1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಸಂಘಟನಾತ್ಮಕ ಹೋರಾಟ ಬ್ರಿಟೀಷರ ವಿರುದ್ದ ನಡೆಯುತ್ತಲೇ ಇತ್ತು. ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆಯವರುಗಳು ಭಾರತವನ್ನು ಮಹಾ ಹೋರಾಟವೊಂದಕ್ಕೆ ಸಜ್ಜುಗೊಳಿಸುತ್ತಲೆ ಇದ್ದರು..ಗಾಂಧೀಜಿಯವರ ಆಗಮನದಿಂದ ಹೋರಾಟ ವ್

ಹೇಳು.

ತೇಲುವ ಮೇಘದ ಮೇಗಡೆಯೆಲ್ಲೋ ಅಡಗಿಹೆಯಾ ನೀನು? ನೀ ಹನಿಯಾಗಿ ಇಳಿಯುವೆಯೆಂದು ಕಾಯುತಿಹೆ ನಾನು. ನೀ ಸೂಸಿದರೆ ಹೂನಗೆಯನ್ನು ಹೂವಿಗೂ ನಗುವುಂಟು, ನಿನ್ನಯ ಕಂಗಳ ಬೆಳಕನು ಕಂಡರೆ ರವಿಗೂ ಹೊಳಪುಂಟು. ನಿನ್ನಯ ದನಿಯ ಮಧುರತೆಯೆದುರು ಕೋಗಿಲೆಗೆಣೆಯುಂಟೆ? ನನ್ನೀ ಕಲ್ಪನೆ ಹಿಂದೆ ತುಂಬಿಹ ಪ್ರೀತಿಗೆ ಕೊನೆಯುಂಟೆ?

ಎದೆಯಾಳದಿಂದ......

ತಡಕಾಡಿ ಪದಗಳಿಗೆ ಬರೆದೆ ಈ ಕವನ . ತಡೆ ತಡೆದು ಹೊಸತೊಂದು ಭಾವ ಸ್ಪುರಣ . ಸಂತಸದ ಮತ್ತಿನಲಿ ಹೆಚ್ಚೇನು ಹೇಳಲಿ ? ಹೇಳು , ನೀ ಎಂದು ಬರುವೆ ನನ್ನೀ ಬಾಳಲಿ ? ಹೇಳುವರು ಅವರು ನೀ ನನ್ನಲೊಂದು ಬಹು ಹಳೆಯಕಾಲದಿಂದ, ಮುಂದೂನು ಹೀಗೆ ಇರುವುದಂತೆ ಈ ನಮ್ಮ ಸಂಬಂಧ. ಆ ಹಿಂದೂ ಮುಂದು ನನಗೀಗ ಬೇಡ ,ನಾ ಕಾಣಲಿಲ್ಲವಲ್ಲ! ಈ ದಿನವೇ ಸತ್ಯ ,ಅದರಲ್ಲೇ ನಿತ್ಯ ನನ್ನ ಪ್ರತೀಕ್ಷೆಯೆಲ್ಲ. ನೀನೆಲ್ಲೇ ಇರಲಿ,ನೀ ಹೇಗೆ ಇರಲಿ ನನಗಿಲ್ಲ ಅದರ ಚಿಂತೆ, ಕಪ್ಪಾದರೇನು? ಬಿಳುಪಾದರೇನು? ಒಂದೊಂದು ಬಣ್ಣದಂತೆ. ಕೊಟ್ಟಾದಮೇಲೆ ಮನಸನ್ನು ನಿನಗೆ ಕಿತ್ತಿಡಲು ಸಾಧ್ಯವೇನು? ಮನದಲ್ಲೇ ಹೀಗೆ ಬಿಕನಾಸಿಯೆಂದು ನೀ ನನ್ನ ತಿಳಿದೆಯೇನು? ಹೇಳುವೆನು ಕೇಳು ನಾ ಇಲ್ಲೇ ಹೀಗೆ ಮಾತಲ್ಲ ನನ್ನ ಗೀಳು. ಕೈ ಹಿಡಿದ ಮೇಲೆ ಬಿಡಲಾರೆ ನಾನು ಕೊನೆವರೆಗೂ ಜೋಡಿ ಬಾಳು. ಕೇಳುವೆನು ನಾನು ನಿನ್ನಲ್ಲಿ ಒಂದು ತಪ್ಪೇನು ಇಲ್ಲ ತಾನೇ? ಬರುವವಳೇ ನೀನು ಆಗಿರಲೆಬೇಕು ಬಂಗಾರಗುಣದ ಕನ್ಯೆ.

ಭ್ರಾಂತ ಏಕಾಂತ

ಕತ್ತಲ ರಾತ್ರಿಯ ನೀರವ ಮೌನದಿ ನೆನಪಾಗಿಹೆ ನೀನು. ಕಣ್ಣನು ಮುಚ್ಚಲು ಮೌನವ ಸೀಳಿ ನುಡಿಯುವೆ ಏನೇನೋ. ಕಂಠದ ಮಧುರತೆ ಮತ್ತೇರಿಸುತಿದೆ, ತೇಲುತಿಹೆ ನಾನು. ಎದುರಿಗೆ ಬಾರದೆ ಕಾಡುವೆ ಹೀಗೆ ,ಕಾರಣ ಹೇಳಿನ್ನು. ಕಣ್ಣನು ಮುಚ್ಚಲು ನನ್ನೆಡೆ ಬಂದು ಸೂಸುವೆ ಹೂ ನಗೆಯ, ಕಣ್ಣಲೆ ಹೇಳುವೆ ನೋಡುತ ನನ್ನನೆ ಏನೋ ಭಾವನೆಯ. ಭಾವನೆ ಅರ್ಥವ ಅರಿಯಲಾಗದೆ ನಾ ಪದುತಿಹೆ ಯಾತನೆಯ, ಕರೆಯಲೇ, ನಿನ್ನನು ಭ್ರಾಂತಿಯ ತುಂಬಿ ಕಾಡುತಿಹ ಮಾಯಾ?

ನನ್ನ ಕವನ

ನನ್ನ ಕವನ ಬರೀ ಕವನವಷ್ಟೇ, ಮತ್ತೇನಲ್ಲ. ಬರೆದದ್ದಕ್ಕೆಲ್ಲ ಏನಿರುತ್ತದೆ ವಿಶೇಷ? ನನ್ನ ಸಾಲುಗಳು ಕ್ರಾಂತಿಕಾರಿಯೇನಲ್ಲ, ಸುಧಾರಣೆ ಮಾಡಲು ಶಕ್ತವಲ್ಲ. ಮಳೆಗಾಲದಲ್ಲಿದ್ದು ಬೇಸಿಗೆಯಲ್ಲಿ ಮಾಯವಾಗುವ ಸಣ್ಣ ತೊರೆಯಂತೆ ಈಗ ಇದೆ, ಈಗ ಇಲ್ಲ. ಮನವೆಲ್ಲೋ ಕುಣಿದಾಗ ಅಥವಾ ಜಂಜಡ ದಿಂದ ದಣಿದಾಗ ನನ್ನೊಳಗಿಂದ ಬರುತ್ತದೆ.ಎಲ್ಲಿಂದ? ಗೊತ್ತಿಲ್ಲ. ಧುಮ್ಮಿಕ್ಕುತ್ತದೆ ಜಲಪಾತದಂತೆ, ಏನು ಹೇಳಲಿ ನನ್ನ ಪಾಡು ತತ್ತರಿಸಿಹೊಗುತ್ತೇನೆ ನಾನು. ಮರುಕ್ಷಣವೆ ಮಾಯ , ಮನ ತೊಯ್ದ ನೆಲದಂತೆ. ಅಬ್ಬರವಿಲ್ಲ,ಆದ್ರೆ ಒಳಗೆಲ್ಲ ತಂಪು. ಕೆಲವು ಪದಗಳ ಸಾಲು ಅದು. ತೂಕವೆನಿಲ್ಲ. ಗಾಳಿ ಗುಳ್ಳೆಯಂತೆ. ಅದಕ್ಕೆಲ್ಲಾದರೂ ತೂಕವುಂಟೆ? ಸುಮ್ಮನೆ ಹಾರಾಡುತ್ತದೆ ಬಾನಗಲ. ಅದರೂ ಅದಕ್ಕೆ ಬಾನೆ ಸಾಲದು. ಸ್ವಚ್ಚಂದ ಅದು. ಮಿತಿಯಿಲ್ಲ. ಭಾರವಿದ್ದಿದ್ದರೆ ಅದು ಹಾರುತ್ತಿರಲಿಲ್ಲ. ಈಗದು ಹಾರುತ್ತದೆ ಬಹುದೂರ. ನನ್ನನ್ನೂ ಕರೆದುಕೊಂಡು........

ಇಬ್ಬಗೆಯ ನೀತಿ ಏಕೆ?

            ಇತ್ತೀಚೆಗೆ ತುಂಬಾ ಚಚಿ೯ತವಾಗಿರುವ ಗೋ ಹತ್ಯೆ ನಿಷೇದದ ಬಗ್ಗೆ ವಿಚಾರ ಮಾಡಿದಾಗ,ನಿಷೆದವನ್ನು ವಿರೋಧಿಸುವವರ ನಿಲುವಿನ ಬಗ್ಗೆ ಕೆಲವು ಪ್ರಶ್ನೆಗಳು ಮೂಡುತ್ತವೆ. ನೀವು ಗೋ ಹತ್ಯೆಯನ್ನು ಸಮರ್ಥಿಸುತ್ತೀರಿ ಎಂದಾದಲ್ಲಿ ಇತ್ತೀಚಿಗೆ ಕುಷ್ಟಗಿಯಲ್ಲಿ ನಡೆದ ಪ್ರಾಣಿ ಬಲಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು. ಪ್ರಾಣಿ ಬಲಿಯನ್ನು ವಿರೋಧಿಸುವಿರಿ ಎಂದಾದರೆ ,ಗೋ ಹತ್ಯೆಯನ್ನು ಹೇಗೆ ತಾನೇ ಸಮರ್ಥಿಸುತ್ತೀರಿ. ಸ್ವಯಂ ಘೋಷಿತ ಮಹನೀಯರೆಲ್ಲರೂ ಒಂದೇ ಮನಸ್ತಿತಿಯನ್ನು ಹೊಂದಿದ್ದಾರೆ . ಪ್ರಾಣಿ ಬಲಿಯನ್ನು ಅವ್ರು ಸುತರಾಂ ಬೆಂಬಲಿಸಲಾರರು . ಬೆಂಬಲಿಸಿದಲ್ಲಿ ಅವರು ಅಜ್ಞಾನಿ, ಅವೈಚಾರಿಕ , ಮೂಢವ್ಯಕ್ತಿ ಎಂದಾಗುತ್ತಾರೆ.ಆದರೆ ಗೋ ಹತ್ಯೆಯ ನಿಷೆಧವನ್ನು ತೀವ್ರವಾಗಿ ಖಂಡಿಸುತ್ತಾರೆ. ಇದು ಅವರನ್ನು ವೈಚಾರಿಕರನ್ನಾಗಿಯೂ, ಹೋರಾಟಗಾರರನ್ನಾಗಿಯೂ, ಜಾತ್ಯಾತೀತರನ್ನಾಗಿಯೂ ಮಾಡುತ್ತದೆ. ಒಂದೇ ರೀತಿಯ ಘಟನೆಗಳ ಮೇಲೆ ಎರಡು ವಿಭಿನ್ನ ರೀತಿಯ ಅಭಿಪ್ರಾಯಗಳು ಬರುವುದು ವ್ಯಕ್ತಿಯ ಲಜ್ಜೆಗೆಟ್ಟ ತನವನ್ನು ತೋರಿಸುತ್ತದೆ.          ಗೋ ಹತ್ಯೆ ಮಾಡುವುದು ಆಹಾರ ಪದ್ದತಿಯ ದೃಷ್ಟಿಯಿಂದ ಅನಿವಾಯ೯ ಎನ್ನುವುದಾದರೆ, ಬಲಿ ನೀಡುವುದು ಕೂಡ ಧಾಮಿ೯ಕ ಪದ್ದತಿಯ ದೃಷ್ಟಿಯಿಂದ ಅನಿವಾಯ೯ ಎಂದರೆ ತಪ್ಪಾಗುತ್ತದೆಯೆ? ಒಂದು ಸರಿ,ಇನ್ನೊಂದು ತಪ್ಪಾಗಲು ಹೇಗೆ ಸಾಧ್ಯ?.ತಪ್ಪೆನ್ನುವುದಾದರೆ ಎರಡೂ ತಪ್ಪು. ಸರಿ ಎಂದಾದರೆ ಎರಡೂ ಸರಿ. ಏಕೆಂದರೆ ಎರಡೂ