ಪೋಸ್ಟ್‌ಗಳು

ಜುಲೈ, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದೇಶವಲ್ಲ, ಮಾತೆ ಆಗಬೇಕು

ಇಮೇಜ್
             ಯಾವ ದೇಶದಲ್ಲಿ ಹಿಂದಿನ ತಲೆಮಾರಿನವರ ಸಂಸ್ಮರಣೆ ಇರುವುದಿಲ್ಲವೋ, ಆ ದೇಶದಲ್ಲಿ ವರ್ತಮಾನವೂ,ಭವಿಷ್ಯವೂ ಆಶಾದಾಯಕವಾಗಿರುವುದಿಲ್ಲ. ಏಕೆಂದರೆ ಅವರು ಪಡೆದುಕೊಂಡಿರುವುದೆಲ್ಲ ತಮ್ಮ ಹಿಂದಿನ ತಲೆಮಾರಿನವರು ನೀಡಿರುವುದನ್ನೆ. ಈಮಾತು ನಮ್ಮ ದೇಶಕ್ಕೂ ಅನ್ವಯಿಸುತ್ತದೆ. 9ನೇ ತರಗತಿಯ ಇಂಗ್ಲಿಷ್ ಪುಸ್ತಕದಲ್ಲಿ Little Martyr ಎಂಬ ಪಾಠ ಇದೆ. ಹುಬ್ಬಳ್ಳಿಯ ನಾರಾಯಣ ಮಹಾದೇವ ಢೋಣಿ ಎನ್ನುವ 13ವರ್ಷದ ಹುಡುಗನೊಬ್ಬ,"ಕ್ವಿಟ್ ಇಂಡಿಯಾ" ಚಳುವಳಿಯ ಸಮಯದಲ್ಲಿ ಬ್ರಿಟೀಷರ ಗುಂಡಿಗೆ ಬಲಿಯಾದ ಕರುಣಾಜನಕ ಕಥೆ ಅದು. ನಮ್ಮ ದೇಶ ಸ್ವಾತಂತ್ರಕ್ಕಾಗಿ ನಡೆಸಿದ ಸುದೀರ್ಘ ಹೋರಾಟದಲ್ಲಿ ಇಂತಹ ಅದೆಷ್ಟು ಅಮಾಯಕರು ಪ್ರಾಣ ನೀಡಿರಬಹುದು? ಲೆಕ್ಕ ಇದೆಯೆ? ಸ್ವಾತಂತ್ರ್ಯ ಹೋರಾಟದ ನಂತರದ ದಿನಗಳಲ್ಲಿ ಭೂಮಿಯ ಮೇಲಿರುವ ನಮಗೆ, ಆ ದಿನಗಳಲ್ಲಿ ನಮ್ಮ ಹಿರಿಯರು ಅನುಭವಿಸಿದ ಕಷ್ಟಕೋಟಲೆಗಳ, ನೋವಿನ ಮಹತ್ವದ ಕಿಂಚಿತ್ತಾದರೂ ಅರಿವು ಇದೆಯ? ಇವತ್ತಿನ ಪರಿಸ್ತಿತಿಯನ್ನು ಗಮನಿಸಿದಾಗ ಈ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.                  1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಸಂಘಟನಾತ್ಮಕ ಹೋರಾಟ ಬ್ರಿಟೀಷರ ವಿರುದ್ದ ನಡೆಯುತ್ತಲೇ ಇತ್ತು. ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆಯವರುಗಳು ಭಾರತವನ್ನು ಮಹಾ ಹೋರಾಟವೊಂದಕ್ಕೆ ಸಜ್ಜುಗೊಳಿಸುತ್ತಲೆ ಇದ್ದರು..ಗಾಂಧೀಜಿಯವರ ಆಗಮನದಿಂದ ಹೋರಾಟ ವ್