ಪೋಸ್ಟ್‌ಗಳು

2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಧುರ ನೆನಪಲಿ....

ಮರೆತೆ ಹೋಗದು ಭಾವಕೊಲಿದಿಹ ಮಾತಿಗೊಲಿಯದ ಪದಗಳು ಸ್ವಚ್ಛವಾಗಿಯೆ ಮೂಡಿ ಬಂದಿಹ ನುಡಿಯಲಾಗದ ನುಡಿಗಳು ಮೌನದಲಿ ಸವಿ ಸವಿಯಬೇಕಿಹ ಸಿಹಿಯ ಮೀರಿದ ಸಿಹಿಯದು ಕಿವಿಯ ತಲುಪದು ಹೃದಯ ಕೇಳುವ ಹೃದಯಗಾನದ ಸವಿಯದು ಯಾವ ಕಾರಣವೆಂಬುದಿಲ್ಲದೆ ಮೂಡಿ ಬಂತೆಲೆ ಸುಮ್ಮನೆ ಬಂದು ಹೋಗುತ ನೀಡಿ ಹೋಗಿದೆ ಮರೆಯಲಾರದ ನೆನಪನೆ ಇಂದು ಕುಳಿತೆಡೆ, ಒರಗಿ ಕೊಂಡೆಡೆ ನೆನಪಾಯ್ತು  ಆ ಹಿತ ಒಮ್ಮೆಲೆ ನುಡಿಯಲಾರದೆ ಪದಗಳಲಿ ಹಿತವನು ನಗು ನಗುವೆ ಸುಕಾಸುಮ್ಮನೆ

ರಂಗ ವಿಚಾರ (ಕಥೆ)

ಇಮೇಜ್
        'ಶ್ರೀ......ಗುರುಗಣಾಧಿಪತಯೇ......... ನಮಃ....... ಸಕಲ ಕಾರ್ಯ........ವಿಜಯೀ ಭವ..........' ಕಂಚಿನ ಕಂಠದಲ್ಲಿ ಈ ಗಾನ  ಕೇಳಿಬರುತ್ತಲೇ ಗುಜುಗುಜು ಸದ್ದಿನ ಜನಸ್ತೋಮವೆಲ್ಲ ಸ್ತಬ್ಧವಾಯಿತೆಂದೇ ಅರ್ಥ.  ಆ ಧ್ವನಿಗೆ  ಮಂತ್ರ ಮುಗ್ಧನಾಗದ ಯಕ್ಷಗಾನ ಪ್ರೇಮಿಯೇ ಇಲ್ಲ. ಆ ಅದ್ಭುತ ಕಂಠವನ್ನು ಆಲಿಸದ ಯಕ್ಷಪ್ರೇಮಿ ಯಾರಾದರೂ ಇದ್ದಾನೆಂದು ಹೇಳಿದರೆ ಆತ ನಿಜವಾದ ಯಕ್ಷಾಭಿಮಾನಿಯೇ ಅಲ್ಲ ಎನ್ನುವುದು ನನ್ನ ಅಭಿಮತ. ಎತ್ತರದ ಧ್ವನಿಯಲ್ಲಿ ಒಂದು ಸ್ವಲ್ಪವೂ ಕೊಂಕಿಲ್ಲದಂತೆ ಹಾಡುತ್ತಾ ವಿವಿಧ ಮಜಲುಗಳಲ್ಲಿ ತೆರೆದುಕೊಳ್ಳುವ  ಆ ಶೈಲಿಯೇ ಅನುಪಮ. ಯಕ್ಷಲೋಕದ ಹಲವು ತಾರೆಗಳಲ್ಲಿ ಈ ಧ್ವನಿಯ ಗಾರುಡಿಗನನ್ನು ದ್ರುವತಾರೆ ಎಂದು  ಕರೆಯುವುದರಲ್ಲಿ ಯಾವುದೇ ಅತಿಶಯ ಇಲ್ಲ ಎಂಬುದು  ಅವರ ಭಾಗವತಿಕೆಯನ್ನು ಕೇಳಿದ ಪ್ರತಿಯೊಬ್ಬನಿಗೂ ಅನ್ನಿಸುವ ಪ್ರಾಮಾಣಿಕ ಅನಿಸಿಕೆ. ನಾನು ಯಾರ ಬಗ್ಗೆ ಬರೆಯುತ್ತಿದ್ದೇನೆ ಎಂದು ಈಗಾಗಲೇ ತಿಳಿದಿರಬೇಕಲ್ಲ...ಹೌದು ನಾನು ಬರೆಯುತ್ತಿರುವುದು  ಗುಜ್ಜೂರು ರಾಮ ಭಂಡಾರಿಯವರ ಬಗ್ಗೆಯೇ.              ನನಗೆ ಯಕ್ಷಗಾನದ ಖಯಾಲಿ ತುಂಬಾ ಇದೆ. ಆಗೀಗ ಅಲ್ಲಿಲ್ಲಿ ಸಣ್ಣ ಪುಟ್ಟ ವೇಷಗಳನ್ನು ಹಾಕಿದ ಉದಾಹರಣೆಗಳೂ ಇವೆ. ಈ ಘಟ್ಟದ ಕೆಳಗಿನ ಪ್ರದೇಶದವರಿಗೆ ಯಕ್ಷಗಾನದಲ್ಲಿ ಆಸಕ್ತಿಯಿರುವದು ಒಂದು ವಿಶೇಷವೆನಲ್ಲ. ಹಾಗಾಗಿ ನನಗೆ ಯಕ್ಷಗಾನದಲ್ಲಿ ಆಸಕ್ತಿ ಇರುವುದರಲ್ಲಿ ದೊಡ್ಡಸ್ತಿಕೆಯೇನೂ ಇಲ್ಲ. ನನ್ನ ಊರಿನ ಆಸ

ಬೆಳಕು ಬಿದ್ದೊಡನೆ (ಕಥೆ )

ಇಮೇಜ್
      ಸು ತ್ತಲೂ ದಟ್ಟ ಕಾಡು. 'ಟಿರ್..ಟಿರ್....ಟಿರ್...ಟಿರ್' ರಸ್ತೆಯ ಅಕ್ಕಪಕ್ಕದ ಮರಗಳಿಂದ ಹುಳಗಳು ಮಾಡುತ್ತಿದ್ದ ಸದ್ದು ರಾತ್ರಿಯ  ಮೌನವನ್ನು ಸೀಳಿ ಕಿವಿಗೆ ತಾಗುತ್ತಿತ್ತು.  ಕಾಡಿನ ಮಧ್ಯೆ ಅಂಕುಡೊಂಕಾಗಿ ಹಾದುಹೋಗಿದ್ದ ನಿರ್ಜನವಾದ ಕಚ್ಚಾ ರಸ್ತೆಯಲ್ಲಿ  ಅವರಿಬ್ಬರೂ ಸರಸರನೆ ಹೆಜ್ಜೆ ಹಾಕುತ್ತಾ ಮುಂದೆ ಸಾಗುತ್ತಿದ್ದರು. ತುಂಬಾ ದೂರದಿಂದ ನಡೆಯುತ್ತಿದ್ದುದರಿಂದ ಆ ತಂಗಾಳಿ ತೀಡುತ್ತಿದ್ದ ವಾತಾವರಣದಲ್ಲೂ ಅವರ ಮೈಯೆಲ್ಲ ಬೆವರಿತ್ತು. "ಇನ್ನೆಷ್ಟು ದೂರ ನಡೀಬೇಕು?" ನಡೆನಡೆದು ಆಯಾಸಗೊಂಡಿದ್ದ ಲಕ್ಷ್ಮಣ ಕೇಳಿದ. "ಇನ್ನು ಸ್ವಲ್ಪವೇ ದೂರ, ಮನೆ ಬಂದೇ ಬಿಡುತ್ತದೆ" ಈಗಾಗಲೆ ಮೂರು ನಾಲ್ಕು ಬಾರಿ ಹೇಳಿದ್ದನ್ನೇ ಮತ್ತೆ ಹೇಳಿದ ಮಂಜಯ್ಯ. "ಇದನ್ನೇ ಆವಾಗಿನಿಂದ ಹೇಳುತ್ತಾ ಇದ್ದೀಯ. ನಿನಗಾದರೂ ಗೊತ್ತಿದೆಯೋ ಇಲ್ವೋ ನಿಜವಾಗಿಯೂ ಎಷ್ಟು ದೂರ ಅಂತ" ಕೇಳಿದ  ಲಕ್ಷ್ಮಣ.  " ಹಗಲಲ್ಲಾದರೆ ದಾರಿ ಸಾಗಿದ್ದೇ ಗೊತ್ತಾಗೋದಿಲ್ಲ ಎಷ್ಟು ದೂರ ಬಂದು ತಲುಪಿದ್ದೀವಿ ಅಂತ ಆರಾಮಾಗಿ ಗೊತ್ತಾಗ್ತದಪ್ಪ. ಈ ರಾತ್ರಿಯಲ್ಲಿ ಹೇಗೆ ಹೇಳೋದು? ಕೈಯ್ಯಲ್ಲಿರೊ  ಲಾಟೀನಿನ ಬೆಳಕಲ್ಲಿ ಮುಂದೆರಡು ಮಾರು ಬಿಟ್ಟು ಬೇರೆನು ಕಾಣ್ತದೆ? ಅಂದಾಜು ಮೇಲೆ ಮಾತಾಡ್ತಾ ಇದ್ದೀನಿ.   ಬಾ ಇಲ್ಲೇ ಸ್ವಲ್ಪ ದೂರ ಹೋದರೆ ಆಯ್ತು" ಸರಸರನೆ ನಡೆಯುತ್ತಲೇ ಇರುವ ಸಮಸ್ಯೆಯನ್ನು ಹೇಳಿದ ಮಂಜಯ್ಯ.         ಲಾಟೀನಿನ ಬೆಳಕನ್

ಸವೆದ ಕಲ್ಲಿನ ಹಿಂದೆ (ಕಥೆ)

ಇಮೇಜ್
     ವೀರಗಲ್ಲು ಸಾ ಗರದಿಂದ ರೈಲ್ವೇ ಹಳಿಯ ಮೇಲೆಯೇ ತಾಳಗುಪ್ಪ ಕಡೆಗೆ   ಸುಮಾರು 8 ಕಿ ಮಿ ನಡೆದರೆ ನಿಮಗೆ ಸಿಗುವ  ರೈಲ್ವೆ ನಿಲ್ದಾಣದಲ್ಲಿ 'ಕಾನಲೆ' ಎಂದು ದೊಡ್ಡ ಫಲಕದಲ್ಲಿ ಬರೆದಿರುವುದು ಗೋಚರಿಸುತ್ತದೆ. ಅದರರ್ಥ ನೀವೀಗ ಕಾಣುತ್ತಿರುವುದು ಕಾನಲೆ ಊರಿನ ರೈಲ್ವೇ ನಿಲ್ದಾಣ. ಬ್ರಿಟೀಷರ ಕಾಲದ ಈ ರೈಲು ಮಾರ್ಗ ಈಗ ಬ್ರಾಡ್ ಗೇಜ್ ಆಗಿ ಪರಿವರ್ತನೆಯಾಗಿದೆ. ಹಿಂದೆ  ಇಲ್ಲಿ ಒಂದು ಸಣ್ಣ ರೈಲು ನಿಲ್ದಾಣ ಇತ್ತು ಮತ್ತು ರೈಲು ನಿಲುಗಡೆಯೂ ಇತ್ತು. ಈಗ ಇಲ್ಲಿ ಹೊಸ ರೈಲು ನಿಲ್ದಾಣ ಮಾಡಲಾಗಿದೆ ಹಾಗೂ ಈ ನಿಲ್ದಾಣದಲ್ಲಿ ಯಾವುದೇ ರೈಲನ್ನೂ ನಿಲ್ಲಿಸುತ್ತಿಲ್ಲ! ಆ ನಿಲ್ದಾಣದಲ್ಲಿ  ನೀವು ಸಾಗಿ ಬಂದ  ಕಡೆಯಿಂದಲೇ ಬಲಕ್ಕೆ ನೋಡಿದರೆ ಸಾಗರದಿಂದ ಬಂದಂತಹ ಡಾಂಬರು ಹಾದಿಯೊಂದು ರೈಲ್ವೆ ಮಾರ್ಗವನ್ನೇ ದಾಟಿ ಮುಂದುವರೆದಿರುವುದು ಕಾಣುತ್ತದೆ. ಅದು ಮಂಡಗಳಲೆ, ಕಾಗೋಡು, ಮಾಸೂರಿನ ಮೂಲಕ ಸೊರಬ ಸೇರುತ್ತದೆ. ಅಲ್ಲದೆ ಆ ಹಾದಿಯ ಬಲಕ್ಕೆ  ತೆರೆದುಕೊಳ್ಳುವ ದಾರಿಯಲ್ಲಿ ಮುಂದುವರೆದರೆ ನಿಮಗೆ ಸಿಗುವುದು ವರದಾನದಿ. ಅದರಾಚೆ ಇರುವ ಅದರಂತೆ ಊರನ್ನು ದಾಟಿ ನಾಲ್ಕಾರು ಕಿಲೋಮಿಟರುಗಳಲ್ಲಿ ಇತಿಹಾಸ ಪ್ರಸಿದ್ಧ ಕೆಳದಿ ಊರಿಗೆ ನೀವು ತಲುಪುತ್ತೀರಿ.  ನಿಲ್ದಾಣದಿಂದ ಎಡಕ್ಕೆ ನೋಡಿದರೆ  ಹಸಿರು ಹುಲ್ಲಿನ ಚಿಕ್ಕ ಬಯಲು ಹಾಗೂ ನಡುವಲ್ಲಿಯೇ ಇರುವ, ಸಾಗರದಿಂದ ಬಂದ ಡಾಂಬರು ರಸ್ತೆ ಹಾಗೂ ಡಾಂಬರು ರಸ್ತೆಯ ಬಲಕ್ಕೆ ತಿರುಗಿ ಕಾನಲೆ ಊರೊಳಕ್ಕೆ ಸಾಗುವ ಮಣ್ಣು

ಸಾಗಿ ಬಂದ ತೀರ ( ಕಥೆ )

ಇಮೇಜ್
          ಶ ರತ್ಚಂದ್ರ  ಕಾಫಿ ಹೀರುತ್ತಾ ಕುರ್ಚಿಯಲ್ಲಿ  ಕುಳಿತಿದ್ದ ಬಲಗೈಯಲ್ಲಿ ಯಾವುದೋ ಪುಸ್ತಕ  ಇತ್ತು. ತುಂಬಾ ಆಳವಾಗಿ ಅದರಲ್ಲಿಯೇ ಮುಳುಗಿದ್ದ. "ಮಾಮ...ಮಾಮ...ಇಲ್ನೋಡು" ಕುಣಿ ಕುಣಿಯುತ್ತಾ ಬಂದ ಶಾಶ್ವತಿ ಶರತ್ಚಂದ್ರನ ತೊಡೆಯಮೇಲೆಯೇ ಕುಳಿತಳು. " ಇದೇನು ಪುಟ್ಟಿ, ಇದೆಲ್ಲಿಂದ ತಂದೆ ಲೋಟನ? ಅಮ್ಮ  ಏನಾದ್ರೂ ತರೊದಕ್ಕೆ ಲೋಟ ಕೊಟ್ಟು ಕಳಿಸಿದ್ರ" ಶರತ್ಚಂದ್ರ ಸಹಜವಾಗಿಯೇ ಕೇಳಿದ ಆಕೆಯನ್ನು ದಿಟ್ಟಿಸುತ್ತ. " ಇಲ್ಲ ಮಾಮ, ಇದು ನಂಗೆ ಬಹುಮಾನ ಬಂದ ಲೋಟ. ಇವತ್ತು ನಾನು ಹಾಡಲ್ಲಿ ಫಸ್ಟ್ ಬಂದೆ. ಅದಕ್ಕೆ ಕೊಟ್ಟಿದ್ದು" ಹೆಮ್ಮೆಯಿಂದ ತೋರಿಸುತ್ತ ಹೇಳಿದಳು. "ಹೌದ...! ಜಾಣೆ ನೀನು. ಯಾವಾಗಲೂ ಹೀಗೆ ಬಹುಮಾನ ತಗೋಳತಾನೇ ಇರಬೇಕು ನೀನು" ಆಕೆಯನ್ನು ಮುದ್ದಿಸುತ್ತ ಹೇಳಿದ. ಬಹುಮಾನವಾಗಿ ಬಂದ ಚಿಕ್ಕ ಲೋಟಕ್ಕೆ ಅವಳು ಪಡುತ್ತಿರುವ ಖುಷಿ ನೋಡಿ ಶರತ್ಚಂದ್ರನಿಗೂ ಖುಷಿಯಾಯಿತು. " ಹೋಗು, ಅಜ್ಜಿಗೆ ತೋರಿಸು ಹೋಗು"  ಎಂದು ಶರತ್ಚಂದ್ರ ಹೇಳುವುದರೊಳಗಾಗಿ ಶಾಶ್ವತಿ ಕೆಳಗಿಳಿದು ಅಡುಗೆಮನೆಯ ಕಡೆಗೆ ಓಡಿದಳು " ಅಜ್ಜೀ" ಎಂದು ಕೂಗುತ್ತ.         ಶರತ್ಚಂದ್ರ ಆಕೆಯ ಕಡೆಗೇ ನೋಡುತ್ತ ಮನಸ್ಸಿನಲ್ಲಿಯೇ ಅಂದುಕೊಂಡ  " ಎಷ್ಟು ಚುರುಕಿನ ಹುಡುಗಿ. ಸಾವಿರ ಮಾತು ಪಟಪಟ ಆಡ್ತಾನೇ ಇರ್ತಾಳೆ. ಹಾಡು ಶೇಡಿ ಅಂತೇನೇ ಇದ್ರೂ 'ನಾನು ನಾನು' ಅಂತ ಓಡಿ ಬರ್ತಾಳೆ. ಶಾ

ಬೇಡಿಕೊಳ್ಳುವುದ ಬೇಡಿಕೊಳ್ಳದೆ(ಕಥೆ)

ಇಮೇಜ್
           "ಶ್ರೀನಿವಾಸ....ಶ್ರೀನಿವಾಸ. ...." ಕ್ಷೀಣ ಸ್ವರದಲ್ಲಿ ಕೂಗಿದಳು ಸಾವಿತ್ರಮ್ಮ. ಕೆಲವು ಕ್ಷಣಗಳ ನಂತರ ಮತ್ತದೇ ಕೂಗು "ಶ್ರೀನಿವಾಸ..... ಶ್ರೀನಿವಾಸ". ಅದು ಅವಳ ಅನಿವಾರ್ಯವೂ ಆಗಿತ್ತು. ತನ್ನೆಲ್ಲ ಅಗತ್ಯತೆಗಳಿಗೆ ಇದ್ದೊಬ್ಬ ಮಗನನ್ನೇ ಕೂಗಬೇಕಿತ್ತು. ಸಾವಿತ್ರಮ್ಮ ಮಲಗಿದ್ದ ಕೊಣೆಯಿಂದ ಕೂಗಳತೆ ದೂರದಲ್ಲಿಯೆ ಇದ್ದ ಕೊಟ್ಟಿಗೆಯ ಕೆಲಸವನ್ನು ಮುಗಿಸುತ್ತಿದ್ದ ಶ್ರೀನಿವಾಸನಿಗೆ ತಾಯಿಯ ಕ್ಷೀಣವಾದ ಕೂಗು ಮೊದಲಿಗೆ ಕೇಳಿಸಲಿಲ್ಲ. ಎರಡನೇ ಬಾರಿಗೆ ಕೇಳಿಸಿತು. ಮಾಡುತ್ತಿದ್ದ ಕೊಟ್ಟಿಗೆ ಕೆಲಸವನ್ನು ತಕ್ಷಣ ಬಿಟ್ಟುಬರಲಾಗದೆ ಅಲ್ಲಿಂದಲೇ " ಸುಷ್ಮಾ. .. ಅಜ್ಜಿ ಯಾಕೋ ಕೂಗುತ್ತಿದ್ದಾರೆ ನೋಡು" ಎಂದು ಕೂಗಿಕೊಂಡ.  ಜಗುಲಿಯ ಪಕ್ಕದಲ್ಲಿನ ತನ್ನ ರೂಮಿನಲ್ಲಿ ಪರಿಕ್ಷೆಗಾಗಿ ಓದಿಕೊಳ್ಳುತ್ತಿದ್ದ ಸುಷ್ಮಾ ಅಲ್ಲಿಂದಲೇ " ಹಾ... ನೋಡ್ತೇನೇ ಅಪ್ಪಾ" ಎಂದು ಕೂಗಿದವಳೇ ನೇರ ಅಜ್ಜಿಯ ರೂಮಿಗೆ ಬಂದಳು. ರೂಮಿಗೆ ಪ್ರವೇಶ ಮಾಡುತ್ತಲೇ ಮೂಗುಮುಚ್ಚಿಕೊಳ್ಳುವಂತಾಯ್ತು. ಸಾವಿತ್ರಮ್ಮನ ಮುಖದಲ್ಲಿದ್ದ ಅಸಹನೆ ನೋಡಿದಾಗ ಅವಳಿಗೆ ವಿಷಯ ಅರ್ಥವಾಯಿತು. "ಅಮ್ಮ.... ಅಜ್ಜಿಯನ್ನು ನೋಡು ಬಾ. ಗಬ್ಬು ವಾಸನೆ ತಡೀಲಿಕ್ಕಾಗ್ತಾ ಇಲ್ಲ" ಎಂದು ದೊಡ್ಡ ದನಿಯಲ್ಲಿ ಹೇಳಿ, ಮುಂದಿನ ಜವಾಬ್ದಾರಿಯನ್ನೆಲ್ಲ  ಅಮ್ಮನಿಗೆ ವರ್ಗಾಯಿಸಿ ಒಂದು ಕ್ಷಣವೂ ನಿಲ್ಲದೆ ತನ್ನ ಕೋಣೆಗೆ ಓಡಿದಳು.             ಅಡುಗೆ

ಮಹಾಭಾರತ ಕಥಾ

ಇಮೇಜ್
            'ಯದಾ ಯದಾ ಹಿ ಧರ್ಮಸ್ಯ, ಗ್ಲಾನಿರ್ಭವತಿ ಭಾರತ' ಎಂದು ಆರಂಭವಾಗಿ ' ಸಂಭವಾಮಿ ಯುಗೇ ಯುಗೇ....' ಎಂದು ಮುಗಿಯುತ್ತಿದ್ದ ಮಹೇಂದ್ರ ಕಪೂರ್ ಅವರ ಧ್ವನಿಯಲ್ಲಿದ್ದ  ಗೀತೆಯೊಂದಿಗೆ ಪ್ರಾರಂಭವಾಗುತ್ತಿದ್ದ 'ಮಹಾಭಾರತ' ಹಿಂದಿ ಧಾರಾವಾಹಿ 1988ರ ಹೊತ್ತಿಗೆ ದೇಶದಾದ್ಯಂತ ಜನಪ್ರಿಯವಾಗಿತ್ತು. ವ್ಯಾಸರ ಮಹಾಭಾರತವನ್ನಾಧರಿಸಿಯೇ ಮೂಡಿ ಬಂದಿದ್ದ ಧಾರಾವಾಹಿ ಅದು.  ಸುಮಾರು 2 ವರ್ಷಗಳ ಕಾಲ 94 ಎಪಿಸೋಡ್ಗಳಲ್ಲಿ ಪ್ರಸಾರವಾಗಿದ್ದ ಧಾರಾವಾಹಿ ಆ ದಿನಗಳಲ್ಲಿ ಅತ್ಯಂತ  ಹೆಚ್ಚು ಟಿ ಆರ್ ಪಿ ಗಳಿಸಿದ ಹೆಮ್ಮೆ ಹೊಂದಿತ್ತು.  ಧಾರಾವಾಹಿ ಪ್ರಸಾರವಾಗುತ್ತಿದ್ದ ಸಮಯದಲ್ಲಿ ರಸ್ತೆಗಳೆಲ್ಲ ಖಾಲಿಯಿರುತ್ತಿದ್ದವಂತೆ ಎಂದರೆ ಅದರ ಜನಪ್ರಿಯತೆ ಎಷ್ಟಿತ್ತು ಎಂದು ತಿಳಿಯಬಹುದು. ನಮಗೆಲ್ಲ ಟಿ ವಿ ಎಂಬುದು ಒಂದು ಮಾಯಾಪೆಟ್ಟಿಗೆಯಾಗಿ, ಸುಲಭವಾಗಿ ಕೈಗೆಟುಕದ ವಸ್ತುವಾಗಿದ್ದ ಕಾಲ ಅದು. ನನ್ನೂರಿನಲ್ಲೆಲ್ಲೂ ಟಿ ವಿ ಇರಲಿಲ್ಲ. ನಂತರದ ದಿನಗಳಲ್ಲಿ ಧಾರವಾಹಿಯ ಬಗ್ಗೆ ಕೇಳಿ ಕುತೂಹಲಿಯಾಗಿದ್ದ ನಾನು ನೋಡಬೇಕೆಂದುಕೊಂಡಿದ್ದೆ . ಈಗ ಸಂಪೂರ್ಣ ಧಾರವಾಹಿಯ ಎಂಟು ಡಿವಿಡಿಗಳನ್ನು ನೋಡಿದ ಮೇಲೆ ಖಂಡಿತವಾಗಿಯೂ ' ಮಹಾಭಾರತ' ಧಾರಾವಾಹಿ ಒಂದು ಅದ್ಭುತ ನಿರ್ಮಾಣ ಎನ್ನಿಸುತ್ತಿದೆ.             ಈ ಧಾರಾವಾಹಿ ಹಾಗೂ ರಮಾನಂದ ಸಾಗರ್ ಅವರ ರಾಮಾಯಣ ಇವೆರಡೂ ನಿರ್ಮಾಣವಾಗಲು ರಾಜೀವ್ ಗಾಂಧಿ ಕಾರಣ ಎಂಬ ಅಂತರ್ಜಾಲದ ಬರಹವೊಂದನ್ನು ಓ

ಪ್ರವಾಹ ನದಿಯಲ್ಲ. ...

ಸೊಕ್ಕಿನಲಿ  ಉತ್ಕಂಟ ಕಿರುಚಾಟ ಮಾಡುತ್ತ ಮೈ ತುಂಬಿ ಮುನ್ನಡೆದು ಶರವೇಗದಿಂದುರುಳಿ ಪಥದಿ ಸಿಕ್ಕೆಲ್ಲವನು ದಯೆಯಿಲ್ಲದೆಳೆದೊಯ್ದು ಪ್ರತಿಯೊಬ್ಬರೆದೆಯಲ್ಲು ಭಯ ಭೀತಿಗಳ ಬಿತ್ತಿ ಸಾಗುವ ಪ್ರವಾಹ ನದಿಯಲ್ಲ.... ಈಗ ಅಳಿದೇನೆಂಬ ಅರಿವೆಯೇ ಇಲ್ಲದೆ ಅಳಿಸುತ್ತಿರುವೆ ಎಂಬ ಕಲ್ಪನೆಯು ಇಲ್ಲದೆ ಒಡಲಲ್ಲಿ ಕಸಕಡ್ಡಿ ವ್ಯರ್ಥವನೆ ಒಯ್ಯುತ್ತ ವಿನಾಶಕ್ಕಿಂತ ಹೆಚ್ಚೇನು ಸಾಧಿಸದೆ ಸಾಗುವ ಪ್ರವಾಹ ನದಿಯಲ್ಲ.... ತನ್ನನ್ನೆ ಆಧರಿಸಿ ತನ್ನನ್ನೆ ಸತ್ಕರಿಸಿ ತನ್ನನ್ನೆ ನಂಬಿ ಕನಸುಳ ಕಟ್ಟಿ ಬಾಳ್ವೆಯಲಿ ಸಾಗಿರುವ ಜನರ ಕಣ್ಣುಗಳಲ್ಲಿ ಶೋಕ ವಿಷಾದ ಸಂಕಟವ ತುಂಬುತ್ತ ಸಾಗುವ ಪ್ರವಾಹ ನದಿಯಲ್ಲ. ... ಜೀವ ಜಲವನು ನೀಡಿ ಜೀವಿ ಸಂಕುಲಕೆಲ್ಲ ತನ್ನ ಪಾತ್ರವನೆಲ್ಲ ಫಲಪೂರ್ಣ ಮಾಡಿ ಕೊನೆ ಸೇರುವಲ್ಲಿ ಧನ್ಯತೆಯ ತಳೆಯುವ ಶಾಂತ ನದಿ ಕ್ಷಣಕಾಲ ಉನ್ಮತ್ತವಾಗಿ ಸಾಗುವ ಪ್ರವಾಹ ನದಿಯಲ್ಲ. ...

ಹೆಣಗಾಟ...

ಸುತ್ತಮುತ್ತಲು ದಟ್ಟ ಕತ್ತಲು ಮೌನ ತಬ್ಬಿದೆ ಇರುಳನು ಜೀರಿಡುವ ಜೀರುಂಡೆ ಕರ್ಕಶ ಕೊಯ್ಯುತಿದೆ ಮೌನದ ಕೊರಳನು ಅಜ್ಞಾತವಾಗಿಹ ಕದವ ತೆರೆದು ಮನದೊಳಗೆ ಕೋಲಾಹಲ ಮರೆತೆ ಹೋದ ನೆನಪುಗಳಿಗೆ ಹೊರಬಂದು ಕಾಡುವ ಹಂಬಲ ಭಯವ ಬಿತ್ತಿ ನನ್ನ ಎದೆಯ ನಡುಕ ನೋಡಲು ಏಕೆ ಕಾತುರ? ಕಾಣೆಯಾದ ಹಳೆಯ ಕ್ಷಣಗಳ ಕಣ್ಮುಂದೆ ತರುವಿರಿ ಏತಕೀತರ? ನನ್ನೆದೆಯ ಒಳಗೆ ದೀಪ ಹಚ್ಚಿ ಬೆಳಕ ತರಲು ಹೆಣಗುತಿರುವೆ ಕತ್ತಲೆಯ ಹೊಮ್ಮಿಸಿ ನನ್ನ ಈ ತರ ಸಂಕಟಕೆ ಎಳೆವುದು ನಿಮಗೆ ತರವೇ?

ಚಿಗುರಿದಾಗ. ...

ನೀನು ಹೇಳಲೆ ಇಲ್ಲ ನಾನು ಕೇಳಲೆ ಇಲ್ಲ ಆದರೂ ಚಿಗುರಿಹುದು ಈ ಪ್ರೀತಿಯು ಅದು ನಿನಗು ತಿಳಿದಿಹುದು ನನಗದರ ಅರಿವಿಹುದು ನೋಡೆಂತ ವೈಚಿತ್ರ್ಯ ಈ ರೀತಿಯು. ಮಾತುಗಳು ಇದ್ದರೂ ಇದರ ಸುದ್ದಿಯೆ ಇಲ್ಲ ಏನೇನೋ ಮಾತಾಡಿ ಹೊತ್ತು ಕಳೆದ್ಹೋಯ್ತು. ಅರ್ಥವಿಲ್ಲದ ಮಾತ ಹಿಂದಿರುವ ಗೂಢಾರ್ಥ ಪ್ರೀತಿಯೆಂಬ ವಿಷಯ ತಾನೆ ಅರಿವಾಯ್ತು. ಮನಸ ಈ ಭಾವನೆಗೆ ಪದಗಳೇತಕೆ ಹೇಳು ಮೌನವೆ ಎಲ್ಲವನು ಹೇಳುತಿರುವಾಗ ನಿನ್ನ ಹೃದಯದ ನುಡಿಯು ನನ್ನ ಹೃದಯವ ತಾಕಿ ಕುಶಲ ಸಂಭಾಷಣೆಯ ಮಾಡುತಿರುವಾಗ ಭಾವನೆಯ ಕಂಡು ನೀ ಭಯಪಡುವುದೇತಕ್ಕೆ ಅದು ದಿವ್ಯ, ಅದು ರಮ್ಯ ಇರಲಿ ಬಿಡು ಹಾಗೆ. ಇಂದಿನ ಚಿಗುರು ನಾಳೆ ಮರವಾದಾಗ ಕೀಳಲಾಗದು ಅದನು ಸುಲಭದಲಿ ಹೀಗೆ ನಾವು ಪೋಷಿಸಬೇಕು ಅದು ಮರವಾಗುವಂತೆ ಆಮೇಲೆ ಅದು ಅಮರವಾಗುವಂತೆ

ಮತ್ತೆ ಪರಿತಾಪವೊಂದೇ......

ಹೊತ್ತು ಮುಳುಗುವ ಮುನ್ನ ಮಾಡಿಬಿಡು ಕೆಲಸಗಳ ಇಲ್ಲದಿದ್ದರೆ ಮತ್ತೆ ಅವಕಾಶ ಸಿಗದು ತಂದೆ ತಾಯ್ಗಳ ಸೇವೆ ಇಂದೆ ನೀ ಮಾಡು ನಾಳೆ ನಿನಗಾ ಭಾಗ್ಯ ಸಿಗುವ ಭರವಸೆಯಿಲ್ಲ. ಗರ್ಭದಲಿ ನೀನಿರುವೆ ಎಂದು ತಿಳಿದಾ ಕ್ಷಣವೆ ಮುಡಿಪಿಟ್ಟರು ತಮ್ಮ ಬಾಳು ನಿನಗಾಗಿ ಅವರ ಮನಸು ಹಾಗು ಹಲವು ಕನಸುಗಳೆಲ್ಲ ನಿನ್ನ ಏಳಿಗೆಗಾಗಿ, ನಿನ್ನ ಜೀವಿತಕಾಗಿ ನೂರು ಸಾಲದ ಹೊರೆಯು ನಿನ್ನ ಶಿಕ್ಷಣಕಾಗಿ ಬಾಗಿ ಬೇಡಿತು ಕೈಯಿ ನಿನ್ನ ರಕ್ಷಣೆಗಾಗಿ ಗಡಿಬಿಡಿಯ ನಡುವೆ ನೀ ನೆನೆ ಅದನು ಕ್ಷಣ ಹೊತ್ತು ತುಂಬಿ ಬಂದರೆ ಹೃದಯ ಚೆನ್ನಾಯ್ತು ಗೆಳೆಯ ನಿನ್ನ ಬಾಲ್ಯದ ಆಟ, ಜೊತೆಗೆ ಎಷ್ಟೊಂದು ಹಠ! ಪ್ರೀತಿಯಲಿ ಸಹಿಸಿದರು ಅವರು ಅದನೆಲ್ಲ ನಿನ್ನ ಬೇಡಿಕೆಗಳು ಅವರ ಕೈಗೆಟುಕದಿರೆ ಅವರ ಕಣ್ಣೀರು ನಿನಗೆ ಕಾಣಲೆ ಇಲ್ಲ ಇಂದು ನೀ ನಿಂತಿರುವೆ ನಿನ್ನ ಕಾಲ್ಗಳ ಮೇಲೆ ಅವರ ಕಾಲ್ಗಳ ನೋಡು ಎಷ್ಟು ಬಲಹೀನ ಗೊಡ್ಡು ಜೀವಗಳೆಂದು ದೂರ ತಳ್ಳಲು ಬೇಡ ಅವರ ಆ ವೃದ್ದಾಪ್ಯ ನಾಳೆ ನಿನಗೂ ಇಹುದು ಕಣ್ಣು ಕಾಣುವುದಿಲ್ಲ, ಕಿವಿಯು ಕೇಳುವುದಿಲ್ಲ ಜರ್ಜರಿತ, ನಿಶ್ಯಕ್ತ,ಸೊರಗಿರುವ ದೇಹ ಕೈಸಾಗದಾ ಹೊತ್ತು, ಜೀರ್ಣವಾಗದು ತುತ್ತು ಇದ ನೋಡಿ ನೋಡದಂತಿರಬೇಡ ನೀನು ಮುದಿತನದಿ ಬಯಸುವರು ನಿನ್ನ ಆಸರೆಯನ್ನು ಮನದಲ್ಲೆ ಗೊಣಗೊಣಗಿ ಕುದಿಯಬೇಡ ನಿನ್ನ ಜೀವನ ಅವರು ನಿನಗೆ ಕೊಟ್ಟಿರುವ ವರ ನಿನಗೆ ಶಾಪವೆ ಹೌದು ಅವರ ಕಣ್ಣೀರು ಕೈ ಹಿಡಿದು ನಡೆಸು, ಕಾಲ್ಮುಟ್ಟಿ ನಮಿಸು ಅವರ ಸೇವೆಯ ಭಾಗ್ಯ ನಿನಗೆ ದೊ

ಮನವಿ ನಿನಗೆ......

ಇಮೇಜ್
ಮನದಲಿ ಸ್ವಲ್ವವೆ ಸುಳಿದಾಡು ಹೃದಯದಿ ಸ್ವಲ್ಪವೆ ನಲಿದಾಡು ಮನಸಿನ, ಹೃದಯದ ಸ್ಪಂದನೆಯಿಂದ ನಾ ಪಡೆಯುವೆ ಅಮಿತಾನಂದ ನೀ ಬರಲೇಬೇಕೆನ್ನುವ ಕಾತರ ಎಂದಿಗೆ ಬಂದೀಯೆನ್ನುವ ಆತುರ ಕಾದರು ಬಾರದೆ ಕಾಡುವುದೇತಕೆ? ದೂರದಲೆಲ್ಲೋ ಇರುವುದು ಏತಕೆ? ನಿನ್ನ ಪ್ರವಾಹದ ಧಾರೆಯ ನದಿಗಳು ನನ್ನೊಳು ಉದಯಿಸಿ ನನ್ನನೆ ತೋಯಿಸಿ ಮರುಕ್ಷಣ ಮುಳುಗಿಸಿ ಗಗನಕೆ ಚಿಮ್ಮಿಸಿ ರಮಿಸುವ ಅವುಗಳೇ ಹೋನ್ನಿನ ದಿನಗಳು ಅಂದಿನ ದಿನಗಳ ಇಂದಿನ ನೆನಪು ಇಂದಿನ ದಿನದವೇ ಆಗುವುದೇ? ಅಂದಿನ ಅವುಗಳು ಇಂದೂ ಆದರೆ ಇಂದಿನ ಈ ಕ್ಷಣ ಹೊನ್ನಾಗದೇ?

ಕರುಣೆಸುಧೆ..

ಇಮೇಜ್
ಕಾಯವಳಿದು ಹೋದರೇನು ಖ್ಯಾತಿಯಳಿಯದು ಕರುಣೆ ಸುಧೆಯ ಕಡಲಿಗಿರುವ ಒರತೆ ಬತ್ತದು ಕಂಡರೆಷ್ಟೋ ಜನರು ಅಂದು ತಮ್ಮ ಕಣ್ಣಲೆ ಮರುಕದಿಂದ ತೋರಿದಂತ ಮಹಿಮೆ ಹಲವನು ಮಿಂದರೆಷ್ಟೋ ಜನರು ಆನಂದ ಕಡಲಲೆ ಪಡೆದ ಕ್ಷಣವೆ ದಿವ್ಯವಾದ ಪರಮಕೃಪೆಯನು ತನುವು ಮನವು ತಲುಪದಂತ ಗಮ್ಯವಾವುದೋ ಅದರ ಮೂಲ ತಲುಪಿ ನೀನು ಸರ್ವವ್ಯಾಪಿಯು ಧನವು ತಪವು ಒಂದುಗೂಡಿ ಸಾಗುತಿರುವುದು ಭಕ್ತ ಜನರ ಬೇಗೆ ತಡೆವ ಧರ್ಮ ಕಾರ್ಯವು ಅಂದು ಇಂದು ಎಂದೆಂದಿಗೂ ಒಂದೆತರದಲಿ ಸ್ವಾನಂದದ ಅಮೃತವನ್ನು ಪಾನ ಮಾಡುತ ಶರಣು ಎಂದು ಬಂದ ಜನರ ಕರುಣೆಯಿಂದಲಿ ಕೃಪೆಯ ತೋರಿ ಮೈಯದಡವಿ ಪೊರೆವೆ ಸಂತತ ಶೃತಿಯು ಸ್ಮತಿಯು ಸಾರಿ ನುಡಿವ ನುಡಿಗಳೆಲ್ಲವು ನಿನ್ನದೆಂಬ ಮಾತು ನೀನು ನುಡಿದು ತಿಳಿದೆನು ಕೈಯ ಮುಗಿವೆ ನಿನಗೆ ನಾನು ಶರಣು ಎನ್ನುತ ನಿತ್ಯ ಸತ್ಯ  ನೀನು ಎಂಬದೆನ್ನ ಹೃದ್ಗತ. ಸದ್ಗುರು ಭಗವಾನ್ ಶ್ರೀಧರಸ್ವಾಮಿಗಳು, ವರದಹಳ್ಳಿ