ಪೋಸ್ಟ್‌ಗಳು

ಆಗಸ್ಟ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎರಡು ಧ್ರುವಗಳ ನಡುವೆ (ಕತೆ )

ನನ್ನ  ಕನ್ನಡಕವನ್ನ  ತೆಗೆದು  ಕಣ್ಣೀರು  ಒರೆಸಿಕೊಂಡು ವಾರಿಜಾಳನ್ನು  ನೋಡಿದೆ.  ಶಿವರಾಮು ಹಾಗೂ  ವಾರಿಜ ಒಂದು ಕಾಲದಲ್ಲಿ   ಎಷ್ಟೊಂದು  ಹತ್ತಿರ  ಇದ್ದವರು  ನಂತರ   ಅದೆಷ್ಟು  ದೂರ ಆಗಿಬಿಟ್ಟರು! ಅವಳು ಅಲ್ಲಿ ಬೆಂಗಳೂರಿನಲ್ಲಿ  ,  ಇವನು  ಈ  ಹಳ್ಳಿಯಲ್ಲಿ   ಬದುಕನ್ನು   ಸವೆಸಿಬಿಟ್ಟರು.  ಇವತ್ತು ವಾರಿಜ  ಶಿವರಾಮುವಿಗೆ ಮತ್ತೆ  ಇಷ್ಟು  ಹತ್ತಿರದಲ್ಲಿದ್ದಾಳೆ  ಆದರೆ ಅವರು  ಮೊದಲಿನಂತೆ  ಒಂದಾಗಿರಲು   ಸಾಧ್ಯವಿಲ್ಲ,  ಯಾಕೆಂದರೆ  ಶಿವರಾಮು ಕಣ್ಣೆದುರಿಗಿನ  ಚಿತೆಯಲ್ಲಿ  ಸುಟ್ಟು ಬೂದಿಯಾಗುತ್ತಿದ್ದಾನೆ!  ಇದಕ್ಕೆಲ್ಲ  ಸಾಕ್ಷಿಯಾಗಿ ನಾನು  ನಿಂತಿದ್ದೇನೆ!!  ಹೀಗೆಲ್ಲ  ಯೋಚಿಸುತ್ತ  ಕಣ್ಣೆದುರಿಗೆ   ಧಗಧಗಿಸುತ್ತಿದ್ದ  ಬೆಂಕಿ  ಜ್ವಾಲೆಯನ್ನೇ  ನೋಡುತ್ತಾ  ನಿಂತಿದ್ದೆ .ವಾರಿಜ ಕೂಡ  ತದೇಕಚಿತ್ತವಾಗಿ  ಚಿತೆಯನ್ನೇ  ನೋಡುತ್ತಾ  ನಿಂತಿದ್ದಳು.ಎಲ್ಲವೂ  ಮುಗಿದು ಹೋಗಿ  ಕಣ್ಣೀರಷ್ಟೇ ಆಕೆಯಲ್ಲಿ  ಉಳಿದಿತ್ತು. ನಮ್ಮ  ಕಣ್ಣೆದುರಿಗೆ   ಉರಿಯುತ್ತಿದ್ದ   ಬೆಂಕಿ ಮಾತ್ರ  ಯಾವ  ಭಾವನೆಗಳ  ತಾಕಲಾಟವೂ  ಇಲ್ಲದೆ ತನ್ನ  ಪಾಡಿಗೆ  ತಾನು    ನಮ್ಮ  ಬದುಕಿನ  ಭಾಗವಾಗಿದ್ದ  ಶಿವರಾಮುವನ್ನು  ನಮ್ಮ ಪಾಲಿನ  ನೆನಪಾಗಿ  ಬದಲಾಯಿಸುತ್ತಿತ್ತು.                       **********                ನಾನು ಹಾಗೂ  ಶಿವರಾಮು ಗೆಳೆಯರು  ಎಂದಷ್ಟೇ  ಹೇಳಿದರೆ  ಅದು  ನಮ್ಮ  ಸಂಬಂಧವನ್ನು ಸರಿಯಾಗಿ  ತಿಳಿಸಿದಂತೆ  ಆಗುತ್ತದೆ  ಎಂದು  ನನಗ