ಪೋಸ್ಟ್‌ಗಳು

2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೆಮ್ಮೆಯ ಧ್ವಜ

ಇಮೇಜ್
ಬಾನಗಲದಿ ಸ್ವಚ್ಛಂದದಿ  ಹಾರಿದೆ ನನ್ನಯ ಹೆಮ್ಮೆಯ ಬಾವುಟವು ಪಟಪಟ ಸದ್ದಿನ ಬಾವುಟ ಕಾಣಲು ನರನಾಡಿಗೆ ಅದೆ ಹೊಸ ಕಸುವು ಹಲವರ ಕನಸದು ನನಸಾಯಿತು ಸ್ವಾತಂತ್ರ್ಯವ ದೇಶವು ಪಡೆದಂದು ಹರಿಸಿದ ನೆತ್ತರು, ಸುರಿಸಿದ ಬೆವರು ಪಡೆಯಿತು ತಾ ಸಫಲತೆಯಂದು ತ್ಯಾಗದ ತಳಹದಿ ಮೇಲ್ಗಡೆ ಇರುವ ಜೀವನದರ್ಶನ ಇಲ್ಲಿಹುದು ಪರೋಪಕಾರವು, ಪ್ರತ್ಯುಪಕಾರವು  ಅತಿಸಹಜದಿ ನೆಲೆನಿಂತಿಹುದು ಎಷ್ಟು ಆಕ್ರಮಣ ಮತ್ತೆಷ್ಟು ಲೂಟಿಗಳು ನಡೆದವು ಚರಿತ್ರೆ ಪುಟಗಳಲಿ ಎಲ್ಲವ ಮೀರಿಯೆ ನಿಂತಿದೆ ದೇಶವು ಅಳಿವಿಲ್ಲದೆ ಸ್ಥಿರ ರೂಪದಲಿ ಜೀವನದಾಳವ, ಜೀವನ ಧ್ಯೇಯವ ವಿಶ್ವಕೆ ಸಾರಿದ ದೇಶವಿದು ಪ್ರಜ್ಞೆಯ ಸೀಮೆಯ ತುದಿಯನು ಮುಟ್ಟುವ ಸಾರ್ಥಕ ಬಾಳ್ವೆ ಇಲ್ಲಿಯದು ಮರೆತಿರಬಹುದು ಆ ಮಹದಾದರ್ಶವ ಕಾಲನ ಹೊಡೆತಕೆ ತುತ್ತಾಗಿ ಕುಯುಕ್ತಿಯ ಜನಗಳ ಪಿತೂರಿಯರಿಯದೆ ಅಜ್ಞಾನದ ಅಮಲಿಗೆ ತೊತ್ತಾಗಿ ಕಣ್ಣರಳಿಸಿ ನೋಡಲು ಹೆಮ್ಮೆಯ ಧ್ವಜವನು ಹೃದಯವು ತಾನೇ ಅರಿಯುವುದು ಹಲವು ಸಾವಿರದ ವರ್ಷಗಳಿಂದಲಿ  ಪ್ರಕಾಶಿಸುತಿರುವ ದೇಶವಿದು.

ಆ ಕ್ಷಣದ ಕ್ಷಣಗಣನೆ

ಮನದಲಿ ಸ್ವಲ್ವವೆ ಸುಳಿದಾಡು ಹೃದಯದಿ ಸ್ವಲ್ಪವೆ ನಲಿದಾಡು ಮನಸಿನ, ಹೃದಯದ ಸ್ಪಂದನೆಯಿಂದ ನಾ ಪಡೆಯುವೆ ಅಮಿತಾನಂದ ನೀ ಬರಲೇಬೇಕೆನ್ನುವ ಕಾತರ ಎಂದಿಗೆ ಬಂದೀಯೆನ್ನುವ ಆತುರ ಕಾದರು ಬಾರದೆ ಕಾಡುವುದೇತಕೆ? ದೂರದಲೆಲ್ಲೋ ಇರುವುದು ಏತಕೆ? ನಿನ್ನ ಪ್ರವಾಹದ ಧಾರೆಯ ನದಿಗಳು ನನ್ನೊಳು ಉದಯಿಸಿ ನನ್ನನೆ ತೋಯಿಸಿ ಮರುಕ್ಷಣ ಮುಳುಗಿಸಿ ಗಗನಕೆ ಚಿಮ್ಮಿಸಿ ರಮಿಸಿದ ಅವುಗಳೇ ಹೋನ್ನಿನ ದಿನಗಳು ಅಂದಿನ ದಿನಗಳ ಇಂದಿನ ನೆನಪು ಇಂದಿನ ದಿನದವೇ ಆಗುವುದೇ? ಅಂದಿನ ಅವುಗಳು ಇಂದೂ ಆದರೆ ಇಂದಿನ ಈ ಕ್ಷಣ ಹೊನ್ನಾಗದೇ?

ಬೇಕಿದೆ...

ಮಳೆಯ ಹನಿ ಹನಿ ನೀರು ಭುವಿಯ ಒಡಲೊಳು ಇಳಿದು ಇಳೆಯ ಮೇಲ್ಗಡೆಯಲ್ಲಿ ಹುಲುಸಾದ ಹಸಿರು. ಸದ್ವಿಚಾರಗಳೆನ್ನ ಮನದಲ್ಲಿ ಇಳಿದರೆ ಶುಭವ ಮಾಡುವ ಕನಸೆ ನನ್ನ ಜೀವನದ ಉಸಿರು ಜಗವು ನೀಡುವುದೆನಗೆ ನೂರು ಭಾವಗಳನ್ನು ಅವುಗಳಿಂದ ಮನದಿ ನೂರೊಂದು ಅಚ್ಚು ಆ ಅಚ್ಚುಗಳ ಪರಿಣಾಮ ನನ್ನ ಹೃದಯ ತುಂಬ ರೋಷ ಆವೇಷ, ಕೆಚ್ಚು ರೊಚ್ಚು. ಇಂತ ಕಸ ಕಡ್ಡಿಗಳು ಬೇಡ ಜೀವನದಲ್ಲಿ ಮನಕೆ ಬೇಕಿದೆ ಶಾಂತಿ, ಜೊತೆಗೆ ವಿಶ್ರಾಂತಿ ಕೊಳಕು ಕೊಚ್ಚೆಯ ಕಳೆದು ಪರಿಶುದ್ಧ ಚಿತ್ತದಲಿ ಚಿಮ್ಮಿ ಹೊಮ್ಮಲಿ ನನ್ನ ಪರಿಶುದ್ಧ ಕಾಂತಿ ಇದನೆಲ್ಲ ಅರುಹಿದವ ನೀನಲ್ಲವೆ? ಮತ್ತಾರ ಬಳಿ ಇದನು ಬೇಡಲಾರೆ ಹೇಳಿದವ ನೀನು, ತಿಳಿದವನು ನೀನು ನೀಡಬೇಕಿದನೆನಗೆ ನೀನೆ ಗುರುವೇ.....

ಕೃತಘ್ನನ ಕೃತಜ್ಞತೆ.

ಇಮೇಜ್
          ನಿ:ಶಕ್ತಿಯಿಂದ ಮುಂದೆ ಹೆಜ್ಜೆಯಿಡಲಾರದೆ  ಸುಸ್ತಾಗಿ ಮರಕ್ಕೆ  ಒರಗಿ ನಿಂತ ವೃದ್ಧನಂತೆ ಕಾಣುತ್ತಿರುವ ಈ ಸೈಕಲ್  ನೆಪಮಾತ್ರಕ್ಕಷ್ಟೇ ಬದುಕಿಕೊಂಡಿದೆ. ಜೀವನದುದ್ದಕ್ಕೂ ದುಡಿದು ದಣಿದ, ದುಡಿಮೆಯಾಚೆಗೆ ಜೀವನವನ್ನೇ ಕಾಣದೆ  ಜೀವನದ ಕೊನೆಯಲ್ಲಿ ಯಾರಿಗೂ ಬೇಡವಾಗಿ, ಕಣ್ಣೆದುರಿದ್ದೂ ಎಲ್ಲರಿಂದಲೂ ಉಪೇಕ್ಷೆಗೊಳಗಾದ ವ್ಯಕ್ತಿಯ ಪರಿಸ್ಥಿತಿ ಅದರದ್ದು. ವೃದ್ದಾಪ್ಯದಲ್ಲಿ ತಂದೆತಾಯಂದಿರನ್ನು ಕಡೆಗಣಿಸಿ ಭಂಡತನದಿಂದ ಓಡಾಡಿಕೊಂಡಿರುವ ಮಕ್ಕಳಂತೆ ಸೈಕಲ್ಲಿನ ಈ ಪರಿಸ್ಥಿತಿಯನ್ನು ಕಂಡೂ ಕಾಣದಂತೆ ಇರುವ ಜಗಭಂಡ ನಾನು.  ತನ್ನ ಜೀವನವನ್ನು ನನಗಾಗಿಯೇ ಸವೆಸಿದ ಆ ಸೈಕಲ್ಲಿನ ಬಗ್ಗೆ ಯಾವ ಕೃತಜ್ಞತೆಯನ್ನೂ ತೋರದೆ ನಿರ್ಲಜ್ಜನಾಗಿ ಬದುಕುತ್ತಿದ್ದೇನೆ. ಇಂದು ನನ್ನ ಕಾಲಮೇಲೆ ನಾನು ನಿಂತಿದ್ದೇನೆ. ಆದರೆ ಒಂದಾನೊಂದು ಕಾಲದಲ್ಲಿ ನನ್ನ ಸಂಪೂರ್ಣ ಭಾರವನ್ನು ತಾನು ಹೊತ್ತು ನನ್ನನ್ನು ಮುನ್ನಡೆಸಿದ್ದು ಈ ಸೈಕಲ್ !   ಸರಿಯಾಗಿ  ೧೬ ವರ್ಷಗಳ ಹಿಂದೆ ಈ ಸೈಕಲ್ ನನ್ನ ಬಾಳಿನಲ್ಲಿ ಪ್ರವೇಶಿಸಿತು‌. ನಾನು ಆಗ ಸಿದ್ದಾಪುರದ ಎಂ ಜಿ ಸಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದೆ. ಮನೆಯಿಂದ ತಾಳಗುಪ್ಪದ ವರೆಗೆ ಸೈಕಲ್ ತುಳಿದು ಅಲ್ಲಿಂದ ಬಸ್ಸಿನ ಪ್ರಯಾಣ. ಮನೆಗೆ ವಾಪಾಸಾಗುವುದೂ ಕೂಡ ಇದೇ ರೀತಿಯಲ್ಲಿ. ಒಟ್ಟಾರೆ ೧೦ ಕಿಮಿಯ ಸೈಕಲ್ ಸವಾರಿ ನನ್ನ ಪ್ರತಿನಿತ್ಯದ ಪಾಡಾಗಿತ್ತು. ಮೊದಲು ಒಂದು ಸೈಕಲ್ ಇದ್ದರೂ, ಅದು ನನಗೆ ಗಿಡ್ಡವಾಗಿದ್ದರಿಂದ ಬೆನ್ನು

ಏಕಮೇವ ಕೋರಿಕೆ.

ಇಮೇಜ್
ಸುಖ ಬರುವುದು, ನಲಿವಿರುವುದು ಸಂತೋಷತಾನೆ...! ಅದರ ಜೊತೆಜೊತೆಯೇ ಕಷ್ಟವೂ ಬರಲಿ, ನೋವೂ ಬರಲಿ ಬರಬೇಕಾದುದೆಲ್ಲವೂ ಬಂದೇ ಬರಲಿ ಅದು ಸಹಜವೇನೇ...! ಆದರೆ ನೀ ಎನ್ನ ತೊರೆವ ಕ್ಷಣ, ಕೈ ಬಿಟ್ಟು ನಡೆವ ಕ್ಷಣ, ತಿರುಗಿ ಸ್ವಲ್ಪವು ಎನ್ನ ನೋಡದೆ ಇರುವ ಕ್ಷಣ.... ಶ್ರೀಗುರುವೇ... ಅದು ಮಾತ್ರ ಎಂದಿಗೂ ಬಾರದಿರಲಿ! ಆ ದಿನವ ಈ ಬಾಳು ಕಾಣದಿರಲಿ.!!

ಮುಳುಗಡೆಯಾಗದ ನೆನಪುಗಳು...

ಇಮೇಜ್
        ನಿನ್ನೆ ಅಂದರೆ 17/04/2018ರಂದು ಬರಬಳ್ಳಿಗೆ ಹೋಗಿ ಬಂದೆ. ಬಹಳ ದಿನಗಳಿಂದ ಹೋಗಬೇಕು ಅಂತ ಅಂದ್ಕೊಂಡಿದ್ರೂ ನಿನ್ನೆ ಅವಕಾಶ ಆಯ್ತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ದಟ್ಟ ಕಾಡುಗಳ ನಡುವೆ ಇದ್ದ ಪುಟ್ಟ ಹಳ್ಳಿ ಬರಬಳ್ಳಿ, ನನ್ನ ಅಮ್ಮನ ತವರೂರು. ಆ ಬರಬಳ್ಳಿಯಲ್ಲೇ ನಾನು ಹುಟ್ಟಿದ್ದು. ಬಾಲ್ಯದ ದಿನಗಳಲ್ಲಿ ಬೇಸಿಗೆ ರಜಾ ಬಂದೊಡನೆ ಅಮ್ಮನೊಂದಿಗೆ ಹೋಗಿ ನಲಿದಾಡುತ್ತಿದ್ದ ಸ್ವರ್ಗ ಅದು. ಕಾಳಿ ನದಿಯ ದಡದ ಉದ್ದಗಲಗಳಲ್ಲಿ ಹರಿಡಿಕೊಂಡಿದ್ದ ಊರು ಬರಬಳ್ಳಿ. ವನದೇವತೆಯ ಅಧಿಕೃತ ಆವಾಸ ಎನ್ನುವಂತಿದ್ದ ಆ ಕಗ್ಗಾಡಿನ ಊರಿನಲ್ಲಿ ಚದುರಿಕೊಂಡಿದ್ದ ಅಡಿಕೆ ಹಾಗೂ ತೆಂಗಿನ ಮರಗಳ ಹೊರತಾಗಿ ಉಳಿದ ಮರಗಳೆಲ್ಲ ನೈಸರ್ಗಿಕವಾಗಿಯೇ ಬೆಳೆದುಕೊಂಡಿದ್ದವು. ಉಳಿದೆಲ್ಲ ಮರಗಳು ಎಂದರೆ- ಹಲಸು, ಮಾವು, ಬಾಳೆ, ಸಪೋಟ, ಸೀತಾಫಲ, ಪೇರಲ ,ಪನ್ನೇರಲ, ನೇರಲ ಹೀಗೆ ಕಂಡು ಕೇಳಿದ ಹಣ್ಣುಗಳೆಲ್ಲ  ಬೇಕಾಬಿಟ್ಟಿ ಸಿಗುತ್ತಿದ್ದ ಊರದು. ಇವತ್ತು ಬೆಂಗಳೂರಿನಂತಹ ನಗರಗಳಲ್ಲಿ ಹಲಸಿನ ಸೊಳೆಯೊಂದಕ್ಕೆ ಐದೂ ಆರೋ ರೂಪಾಯಿ ಕೊಡಬೇಕಾಗಿರಬಹುದು . ಆದರೆ ಬರಬಳ್ಳಿಯಲ್ಲಿ ಹಲಸು ತಿಂದು ಮಿಕ್ಕಿ ಕೊಳೆತು ಹೋಗುವುದು ಅತ್ಯಂತ ಸಹಜವಾಗಿತ್ತು. ಹಲಸೊಂದೇ ಅಲ್ಲ. ಎಲ್ಲ ಹಣ್ಣುಗಳ ಕತೆಯೂ ಹೀಗೆಯೇ!. ಹಪ್ಪಳ ,ಪಾಯಸ, ಉಕಡಾಪು, ಹುಳಿ, ಪಲ್ಯ, ಉಪ್ಪಿನಕಾಯಿ, ಗೊಜ್ಜು ಮತ್ತೊಂದು ಮಗದೊಂದು ಹೀಗೆ ಅಡುಗೆಯಲ್ಲೆಲ್ಲ ಹಲಸು, ಮಾವು, ಬಾಳೆಕಾಯಿಗಳದ್ದೇ ಕಾರುಬ

ಜಿ ವಿ ಅತ್ರಿಯ ನೆನಪಿನಲ್ಲಿ...

ಇಮೇಜ್
ಗಣೇಶ ವಿಜಯ್ ಕುಮಾರ್ ಅತ್ರಿ ಎನ್ನುವ ಹೆಸರನ್ನು ಕೇಳಿದವರು ಅಷ್ಟೊಂದು ಇರಲಿಕ್ಕಿಲ್ಲ. ಆದರೆ ಅದೇ ಹೆಸರನ್ನೇ ಚಿಕ್ಕದಾಗಿ 'ಜಿ ವಿ ಅತ್ರಿ' ಅಂದ ತಕ್ಷಣ ಕನ್ನಡ ನಾಡಿನ ಸಂಗೀತ ಪ್ರೇಮಿಗಳ ಕಣ್ಮುಂದೆ ಎತ್ತರದ ನಿಲುವಿನ, ಹೊಳೆಯುವ ಕಂಗಳ,  ನಗುಮುಖದ ಆ ಯುವಕನ ಚಿತ್ರ ಹಾದು ಹೋಗುತ್ತದೆ.  ಅತ್ರಿಯವರ ಮಧುರ ಕಂಠದಿಂದ ಮೂಡಿಬಂದ ಹಾಡುಗಳೆಷ್ಟೋ ಕಿವಿಯಲ್ಲಿ ಅನುರಣನಗೊಳ್ಳುತ್ತವೆ.       1964ರ ಮೇ 21ರಂದು ಜನಿಸಿದ ಅತ್ರಿ ಈಗ ನಮ್ಮೊಡನೆ ಇದ್ದಿದ್ದರೆ 53 ವರ್ಷದವರಾಗಿರುತ್ತಿದ್ದರು.  ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿಹೊಂದಿದ್ದ ಅತ್ರಿ ಸಂಗೀತ ಕ್ಷೇತ್ರದಲ್ಲಿ ಮಿಂಚಿನಂತೆ ಬಂದು ಮರೆಯಾಗಿ ಹೋದವರು.  2000ನೇ ಇಸವಿಯ ಎಪ್ರಿಲ್ 30ರಂದು ಶೃಂಗೇರಿಯಲ್ಲಿ ತುಂಗಾ ನದಿಯಲ್ಲಿ ಸ್ನಾನಮಾಡುವಾಗ ನಡೆದ ದುರಂತದಲ್ಲಿ ಅತ್ರಿ ಪತ್ನಿ ಹಾಗೂ ಪುತ್ರ ಸೇರಿದಂತೆ  ಕುಟುಂಬದ ಐದು ಜನ ಸದಸ್ಯರೊಂದಿಗೆ ಮುಳುಗಿ ಅಸುನೀಗಿದರು. ಈ ದುರಂತ ಸಂಭವಿಸುವಾಗ ಅವರಿಗಿನ್ನೂ 36ರ ಎಳೆ ವಯಸ್ಸು.  ಆದರೆ ಆ ಹೊತ್ತಿಗಾಗಲೇ ಅತ್ರಿಯವರ 200ಕ್ಕೂ ಹೆಚ್ಚು  ಆಡಿಯೋ ಕೆಸೆಟ್ಗಳು ಬಿಡುಗಡೆಯಾಗಿದ್ದವೆಂದರೆ ಅವರು ಅದಿನ್ನೆಂತಹ ಪ್ರತಿಭೆಯಾಗಿದ್ದರು! ಸಂಗೀತ ಜಗತ್ತಿಗಾದ ನಷ್ಟ ಅದಿನ್ನೆಂತದ್ದು!!   ಬೆಂಗಳೂರಿನ ಶೇಷಾದ್ರಿ ಗವಾಯಿಯವರಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಅಭ್ಯಸಿಸಿದ್ದ ಅತ್ರಿ ಸುಗಮ ಸಂಗೀತದ ಕ್ಷೇತ್ರದ ಕಡೆ ವಿಶೇಷ ಗಮನ ಹರಿಸಿದ್ದರು. ತಮ್ಮ ಧ್ವನಿಯ

ಕಳೆದು ಹೋಯಿತು..

ಇಮೇಜ್
ಅಂದು ತಾಷ್ಕಂಟಿನಲಿ ಕಳೆದುಕೂಂಡೆವು ನಾವು ಅತಿ ವಿರಳ, ಬಹು ಸರಳ ರತ್ನವೊಂದ. ವರುಷ ಐವತ್ತೊಂದು ಕಳೆದು ಹೋದರು ಕೂಡ  ಪಡೆಯದಾದೆವು ಮರಳಿ ಅಂತದ್ದೊಂದ. ಸಾಮಾನ್ಯರಲ್ಲಿ ಅತಿ ಸಾಮಾನ್ಯನಾಗಿ ಎತ್ತರದ ಪದವಿಯಲಿ ಈ ಜನಾನುರಾಗಿ ಕುಳಿತು ಆಳಿದರು ಹದಿನೇಳು ತಿಂಗಳು ನೆನಪಾಗಿ ಅರಳುವುದು ಸಂತಸದಿ ಕಂಗಳು ಶತ್ರುಗಳು ಬಂದು ಮುತ್ತಿಗೆಯ ಹಾಕಿದರು ಒಂದಿನಿತು ಕೂಡ ಅಳುಕಲಿಲ್ಲ ಇವರು ಆಯುಧಕೆ ಆಯುಧದೆ ಕೊಡುವೆವುತ್ತರವೆಂದು ಸಾರಿದರು ಅತಿಘೋರ ಸಮರವಂದು ದೇಶದೊಳಿತಿಗೆ ಮಾಡಿ ಉಪವಾಸವೆಂದು ತಮ್ಮಿಂದಲೇ ಅದನು ಜಾರಿಯಲಿ ತಂದು ಗೆದ್ದರು ದೇಶ ವಾಸಿಗಳ ಹೃದಯ ಎಂದೆಂದಿಗೂ ಅದುವೆ ಅವರಾಲಯ ವಾಮನಾಕಾರದಲಿ ಕಣ್ಣ ಕೋರೈಸುವುದು ಸರಳತೆಯ ಹಿಂದಿರುವ ದಿವ್ಯ ಪ್ರಕಾಶ ಪಾದಕೆರಗಿ ಒಮ್ಮೆ ನಮಿಸಬೇಕಿದೆ ಅದಕೆ ಎಂದಾದರೊಂದುದಿನ ಸಿಕ್ಕರವಕಾಶ. ( ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ೫೨ನೇ ಪುಣ್ಯ ತಿಥಿ: ದಿನಾಂಕ ೧೧-೦೧-೨೦೧೮)