ಬೇಕಿದೆ...

ಮಳೆಯ ಹನಿ ಹನಿ ನೀರು
ಭುವಿಯ ಒಡಲೊಳು ಇಳಿದು
ಇಳೆಯ ಮೇಲ್ಗಡೆಯಲ್ಲಿ ಹುಲುಸಾದ ಹಸಿರು.
ಸದ್ವಿಚಾರಗಳೆನ್ನ ಮನದಲ್ಲಿ ಇಳಿದರೆ
ಶುಭವ ಮಾಡುವ ಕನಸೆ ನನ್ನ ಜೀವನದ ಉಸಿರು

ಜಗವು ನೀಡುವುದೆನಗೆ ನೂರು ಭಾವಗಳನ್ನು
ಅವುಗಳಿಂದ ಮನದಿ ನೂರೊಂದು ಅಚ್ಚು
ಆ ಅಚ್ಚುಗಳ ಪರಿಣಾಮ ನನ್ನ ಹೃದಯ ತುಂಬ
ರೋಷ ಆವೇಷ, ಕೆಚ್ಚು ರೊಚ್ಚು.

ಇಂತ ಕಸ ಕಡ್ಡಿಗಳು ಬೇಡ ಜೀವನದಲ್ಲಿ
ಮನಕೆ ಬೇಕಿದೆ ಶಾಂತಿ, ಜೊತೆಗೆ ವಿಶ್ರಾಂತಿ
ಕೊಳಕು ಕೊಚ್ಚೆಯ ಕಳೆದು ಪರಿಶುದ್ಧ ಚಿತ್ತದಲಿ
ಚಿಮ್ಮಿ ಹೊಮ್ಮಲಿ ನನ್ನ ಪರಿಶುದ್ಧ ಕಾಂತಿ

ಇದನೆಲ್ಲ ಅರುಹಿದವ ನೀನಲ್ಲವೆ?
ಮತ್ತಾರ ಬಳಿ ಇದನು ಬೇಡಲಾರೆ
ಹೇಳಿದವ ನೀನು, ತಿಳಿದವನು ನೀನು
ನೀಡಬೇಕಿದನೆನಗೆ ನೀನೆ ಗುರುವೇ.....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಳಕು ಬಿದ್ದೊಡನೆ (ಕಥೆ )

ಸವೆದ ಕಲ್ಲಿನ ಹಿಂದೆ (ಕಥೆ)

ಇಬ್ಬಗೆಯ ನೀತಿ ಏಕೆ?