ಏಕಮೇವ ಕೋರಿಕೆ.

ಸುಖ ಬರುವುದು, ನಲಿವಿರುವುದು
ಸಂತೋಷತಾನೆ...!
ಅದರ ಜೊತೆಜೊತೆಯೇ
ಕಷ್ಟವೂ ಬರಲಿ, ನೋವೂ ಬರಲಿ
ಬರಬೇಕಾದುದೆಲ್ಲವೂ ಬಂದೇ ಬರಲಿ
ಅದು ಸಹಜವೇನೇ...!
ಆದರೆ
ನೀ ಎನ್ನ ತೊರೆವ ಕ್ಷಣ,
ಕೈ ಬಿಟ್ಟು ನಡೆವ ಕ್ಷಣ,
ತಿರುಗಿ ಸ್ವಲ್ಪವು ಎನ್ನ ನೋಡದೆ ಇರುವ ಕ್ಷಣ....
ಶ್ರೀಗುರುವೇ...
ಅದು ಮಾತ್ರ ಎಂದಿಗೂ ಬಾರದಿರಲಿ!
ಆ ದಿನವ ಈ ಬಾಳು ಕಾಣದಿರಲಿ.!!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾವ ಮಳೆ ಸುರಿದೊಡನೆ....(ಕವನ)

ದೀಪ ಬೆಳಗಿತು (ಕಥೆ)

ಇಬ್ಬಗೆಯ ನೀತಿ ಏಕೆ?