ಪೋಸ್ಟ್‌ಗಳು

ಜಿ ವಿ ಅತ್ರಿಯ ನೆನಪಿನಲ್ಲಿ...

ಇಮೇಜ್
ಗಣೇಶ ವಿಜಯ್ ಕುಮಾರ್ ಅತ್ರಿ ಎನ್ನುವ ಹೆಸರನ್ನು ಕೇಳಿದವರು ಅಷ್ಟೊಂದು ಇರಲಿಕ್ಕಿಲ್ಲ. ಆದರೆ ಅದೇ ಹೆಸರನ್ನೇ ಚಿಕ್ಕದಾಗಿ 'ಜಿ ವಿ ಅತ್ರಿ' ಅಂದ ತಕ್ಷಣ ಕನ್ನಡ ನಾಡಿನ ಸಂಗೀತ ಪ್ರೇಮಿಗಳ ಕಣ್ಮುಂದೆ ಎತ್ತರ...

ಕಳೆದು ಹೋಯಿತು..

ಇಮೇಜ್
ಅಂದು ತಾಷ್ಕಂಟಿನಲಿ ಕಳೆದುಕೂಂಡೆವು ನಾವು ಅತಿ ವಿರಳ, ಬಹು ಸರಳ ರತ್ನವೊಂದ. ವರುಷ ಐವತ್ತೊಂದು ಕಳೆದು ಹೋದರು ಕೂಡ  ಪಡೆಯದಾದೆವು ಮರಳಿ ಅಂತದ್ದೊಂದ. ಸಾಮಾನ್ಯರಲ್ಲಿ ಅತಿ ಸಾಮಾನ್ಯನಾಗಿ ಎತ್ತರದ ಪದವಿಯಲಿ ಈ ಜನಾನುರಾಗಿ ಕುಳಿತು ಆಳಿದರು ಹದಿನೇಳು ತಿಂಗಳು ನೆನಪಾಗಿ ಅರಳುವುದು ಸಂತಸದಿ ಕಂಗಳು ಶತ್ರುಗಳು ಬಂದು ಮುತ್ತಿಗೆಯ ಹಾಕಿದರು ಒಂದಿನಿತು ಕೂಡ ಅಳುಕಲಿಲ್ಲ ಇವರು ಆಯುಧಕೆ ಆಯುಧದೆ ಕೊಡುವೆವುತ್ತರವೆಂದು ಸಾರಿದರು ಅತಿಘೋರ ಸಮರವಂದು ದೇಶದೊಳಿತಿಗೆ ಮಾಡಿ ಉಪವಾಸವೆಂದು ತಮ್ಮಿಂದಲೇ ಅದನು ಜಾರಿಯಲಿ ತಂದು ಗೆದ್ದರು ದೇಶ ವಾಸಿಗಳ ಹೃದಯ ಎಂದೆಂದಿಗೂ ಅದುವೆ ಅವರಾಲಯ ವಾಮನಾಕಾರದಲಿ ಕಣ್ಣ ಕೋರೈಸುವುದು ಸರಳತೆಯ ಹಿಂದಿರುವ ದಿವ್ಯ ಪ್ರಕಾಶ ಪಾದಕೆರಗಿ ಒಮ್ಮೆ ನಮಿಸಬೇಕಿದೆ ಅದಕೆ ಎಂದಾದರೊಂದುದಿನ ಸಿಕ್ಕರವಕಾಶ. ( ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ೫೨ನೇ ಪುಣ್ಯ ತಿಥಿ: ದಿನಾಂಕ ೧೧-೦೧-೨೦೧೮)

ಕಾಲ-ಯಾನ

ಕಣ್ಣಿಗೆ ಕಾಣದೆ ಸಾಗುತಲಿರುವ ಅದೃಶ್ಯ ಪಯಣಿಗ ಕಾಲ ಸಾಗಿದೆ ಇಲ್ಲಿಂದಲ್ಲಿಗೆ ಆದರೂ ಇಲ್ಲ ಕಾಲೂ ಬಾಲ. ನೂರಾಸೆಗಳ ಕುದುರೆಯ ಹತ್ತಿ ಹಿಡಿತವೆ ಇಲ್ಲದೆ ಸಾಗುತಲಿಹೆವು ಸರಿಯುತಲಿಹ ಈ ಕಾಲದ ಜೊತೆಯಲೆ ಎತ...

ಎದೆಯೊಳಗಿನ ಮಳೆ.....

ಭೋರ್ಗರೆವ ಮಳೆ ನನ್ನೊಳಗೆ ಬೆಚ್ಚನೆ ಮುಚ್ಚಿಹ ಪದರನು ಸಡಿಲಿಸಿ ಒಳಗಣ ನೆನಪನು ಕೆದಕುತಿದೆ ನೂರಾಸೆಯ ಒಡಲನು ತಟ್ಟುತಿದೆ ಭಿರುಬೀಸಿನ ಈ ಮಳೆಯ ಆರ್ಭಟಕೆ ಮನದ ಸಂಯಮವೆ ಹಾರುತಿದೆ ಸಶಕ್ತವಲ್ಲದ ಕದವನು ಒ...

ಮಧುರ ನೆನಪಲಿ....

ಮರೆತೆ ಹೋಗದು ಭಾವಕೊಲಿದಿಹ ಮಾತಿಗೊಲಿಯದ ಪದಗಳು ಸ್ವಚ್ಛವಾಗಿಯೆ ಮೂಡಿ ಬಂದಿಹ ನುಡಿಯಲಾಗದ ನುಡಿಗಳು ಮೌನದಲಿ ಸವಿ ಸವಿಯಬೇಕಿಹ ಸಿಹಿಯ ಮೀರಿದ ಸಿಹಿಯದು ಕಿವಿಯ ತಲುಪದು ಹೃದಯ ಕೇಳುವ ಹೃದಯಗಾನದ ಸವಿಯ...

ರಂಗ ವಿಚಾರ (ಕಥೆ)

ಇಮೇಜ್
        'ಶ್ರೀ......ಗುರುಗಣಾಧಿಪತಯೇ......... ನಮಃ....... ಸಕಲ ಕಾರ್ಯ........ವಿಜಯೀ ಭವ..........' ಕಂಚಿನ ಕಂಠದಲ್ಲಿ ಈ ಗಾನ  ಕೇಳಿಬರುತ್ತಲೇ ಗುಜುಗುಜು ಸದ್ದಿನ ಜನಸ್ತೋಮವೆಲ್ಲ ಸ್ತಬ್ಧವಾಯಿತೆಂದೇ ಅರ್ಥ.  ಆ ಧ್ವನಿಗೆ  ಮಂತ್ರ ಮುಗ್ಧನಾಗದ ಯಕ್ಷಗಾನ ಪ್ರೇಮಿಯೇ ಇಲ್ಲ. ಆ ಅದ್ಭುತ ಕಂಠವನ್ನು ಆಲಿಸದ ಯಕ್ಷಪ್ರೇಮಿ ಯಾರಾದರೂ ಇದ್ದಾನೆಂದು ಹೇಳಿದರೆ ಆತ ನಿಜವಾದ ಯಕ್ಷಾಭಿಮಾನಿಯೇ ಅಲ್ಲ ಎನ್ನುವುದು ನನ್ನ ಅಭಿಮತ. ಎತ್ತರದ ಧ್ವನಿಯಲ್ಲಿ ಒಂದು ಸ್ವಲ್ಪವೂ ಕೊಂಕಿಲ್ಲದಂತೆ ಹಾಡುತ್ತಾ ವಿವಿಧ ಮಜಲುಗಳಲ್ಲಿ ತೆರೆದುಕೊಳ್ಳುವ  ಆ ಶೈಲಿಯೇ ಅನುಪಮ. ಯಕ್ಷಲೋಕದ ಹಲವು ತಾರೆಗಳಲ್ಲಿ ಈ ಧ್ವನಿಯ ಗಾರುಡಿಗನನ್ನು ದ್ರುವತಾರೆ ಎಂದು  ಕರೆಯುವುದರಲ್ಲಿ ಯಾವುದೇ ಅತಿಶಯ ಇಲ್ಲ ಎಂಬುದು  ಅವರ ಭಾಗವತಿಕೆಯನ್ನು ಕೇಳಿದ ಪ್ರತಿಯೊಬ್ಬನಿಗೂ ಅನ್ನಿಸುವ ಪ್ರಾಮಾಣಿಕ ಅನಿಸಿಕೆ. ನಾನು ಯಾರ ಬಗ್ಗೆ ಬರೆಯುತ್ತಿದ್ದೇನೆ ಎಂದು ಈಗಾಗಲೇ ತಿಳಿದಿರಬೇಕಲ್ಲ...ಹೌದು ನಾನು ಬರೆಯುತ್ತಿರುವುದು  ಗುಜ್ಜೂರು ರಾಮ ಭಂಡಾರಿಯವರ ಬಗ್ಗೆಯೇ.              ನನಗೆ ಯಕ್ಷಗಾನದ ಖಯಾಲಿ ತುಂಬಾ ಇದೆ. ಆಗೀಗ ಅಲ್ಲಿಲ್ಲಿ ಸಣ್ಣ ಪುಟ್ಟ ವೇಷಗಳನ್ನು ಹಾಕಿದ ಉದಾಹರಣೆಗಳೂ ಇವೆ. ಈ ಘಟ್ಟದ ಕೆಳಗಿನ ಪ್ರದೇಶದವರಿಗೆ ಯಕ್ಷಗಾನದಲ್ಲಿ ಆಸಕ್ತಿಯಿರುವದು ಒಂದು ವಿಶೇಷ...

ಬೆಳಕು ಬಿದ್ದೊಡನೆ (ಕಥೆ )

ಇಮೇಜ್
      ಸು ತ್ತಲೂ ದಟ್ಟ ಕಾಡು. 'ಟಿರ್..ಟಿರ್....ಟಿರ್...ಟಿರ್' ರಸ್ತೆಯ ಅಕ್ಕಪಕ್ಕದ ಮರಗಳಿಂದ ಹುಳಗಳು ಮಾಡುತ್ತಿದ್ದ ಸದ್ದು ರಾತ್ರಿಯ  ಮೌನವನ್ನು ಸೀಳಿ ಕಿವಿಗೆ ತಾಗುತ್ತಿತ್ತು.  ಕಾಡಿನ ಮಧ್ಯೆ ಅಂಕುಡೊಂಕಾಗಿ ಹಾದುಹೋಗಿದ್ದ ನಿರ್ಜನವಾದ ಕಚ್ಚಾ ರಸ್ತೆಯಲ್ಲಿ  ಅವರಿಬ್ಬರೂ ಸರಸರನೆ ಹೆಜ್ಜೆ ಹಾಕುತ್ತಾ ಮುಂದೆ ಸಾಗುತ್ತಿದ್ದರು. ತುಂಬಾ ದೂರದಿಂದ ನಡೆಯುತ್ತಿದ್ದುದರಿಂದ ಆ ತಂಗಾಳಿ ತೀಡುತ್ತಿದ್ದ ವಾತಾವರಣದಲ್ಲೂ ಅವರ ಮೈಯೆಲ್ಲ ಬೆವರಿತ್ತು. "ಇನ್ನೆಷ್ಟು ದೂರ ನಡೀಬೇಕು?" ನಡೆನಡೆದು ಆಯಾಸಗೊಂಡಿದ್ದ ಲಕ್ಷ್ಮಣ ಕೇಳಿದ. "ಇನ್ನು ಸ್ವಲ್ಪವೇ ದೂರ, ಮನೆ ಬಂದೇ ಬಿಡುತ್ತದೆ" ಈಗಾಗಲೆ ಮೂರು ನಾಲ್ಕು ಬಾರಿ ಹೇಳಿದ್ದನ್ನೇ ಮತ್ತೆ ಹೇಳಿದ ಮಂಜಯ್ಯ. "ಇದನ್ನೇ ಆವಾಗಿನಿಂದ ಹೇಳುತ್ತಾ ಇದ್ದೀಯ. ನಿನಗಾದರೂ ಗೊತ್ತಿದೆಯೋ ಇಲ್ವೋ ನಿಜವಾಗಿಯೂ ಎಷ್ಟು ದೂರ ಅಂತ" ಕೇಳಿದ  ಲಕ್ಷ್ಮಣ.  " ಹಗಲಲ್ಲಾದರೆ ದಾರಿ ಸಾಗಿದ್ದೇ ಗೊತ್ತಾಗೋದಿಲ್ಲ ಎಷ್ಟು ದೂರ ಬಂದು ತಲುಪಿದ್ದೀವಿ ಅಂತ ಆರಾಮಾಗಿ ಗೊತ್ತಾಗ್ತದಪ್ಪ. ಈ ರಾತ್ರಿಯಲ್ಲಿ ಹೇಗೆ ಹೇಳೋದು? ಕೈಯ್ಯಲ್ಲಿರೊ  ಲಾಟೀನಿನ ಬೆಳಕಲ್ಲಿ ಮುಂದೆರಡು ಮಾರು ಬಿಟ್ಟು ಬೇರೆನು ಕಾಣ್ತದೆ? ಅಂದಾಜು ಮೇಲೆ ಮಾತಾಡ್ತಾ ಇದ್ದೀನಿ.   ಬಾ ಇಲ್ಲೇ ಸ್ವಲ್ಪ ದೂರ ಹೋದರೆ ಆಯ್ತು" ಸರಸರನೆ ನಡೆಯುತ್ತಲೇ ಇರುವ ಸಮಸ್ಯೆಯನ್ನು ಹೇಳಿದ ಮಂಜಯ್ಯ.      ...