ಪೋಸ್ಟ್‌ಗಳು

ಧನ್ಯ ಜೀವನಕ್ಕೆ ಬರೆದ ಮುನ್ನುಡಿ

ವರದಹಳ್ಳಿಯ  ಶ್ರೀಧರ ಸ್ವಾಮಿಗಳು  ಅಪರಿಚಿತರೇನಲ್ಲ.  ಮಹಾರಾಷ್ಟ್ರದಿಂದ  ಕರ್ನಾಟಕಕ್ಕೆ  ಬಂದವರು.  ದೇಶದಾದ್ಯಂತ  ಸಂಚರಿಸಿ  ಜನರಲ್ಲಿ  ಧರ್ಮಜಾಗೃತಿ ಮಾಡಿದವರು,  ಅಧ್ಯಾತ್ಮ  ಅಭೀಪ್ಸೆಯನ್ನು  ಜಾಗೃತಗೊಳಿಸಿದವರು. 20ನೇ  ಶತಮಾನದಲ್ಲಿ  ಭಾರತ  ಕಂಡ  ಶ್ರೇಷ್ಠ ಸಂತರಲ್ಲಿ  ಇವರೂ  ಒಬ್ಬರು.           ಮಹಾರಾಷ್ಟ್ರದ  ಸಜ್ಜನಗಡದಲ್ಲಿ ರಾಷ್ಟ್ರಗುರು ಎಂದೇ ಖ್ಯಾತರಾದ, ಶಿವಾಜಿ  ಮಹಾರಾಜರಿಗೆ  ಮಾರ್ಗದರ್ಶನ ಮಾಡಿದ  ಶ್ರೀ  ಸಮರ್ಥ ರಾಮದಾಸರನ್ನೇ  ತಮ್ಮ  ಗುರುಗಳೆಂದು  ಸ್ವೀಕರಿಸಿ,  ಗುರುಸೇವೆ ಮಾಡಿ  ಪರಮಾತ್ಮ  ಸಾಕ್ಷಾತ್ಕಾರ  ಮಾಡಿಕೊಂಡವರು  ಶ್ರೀಧರ ಸ್ವಾಮಿಗಳು.   ಅವರು  ಅಲ್ಲಿ  ಸಾಧಕರಾಗಿ  ಸಲ್ಲಿಸಿದ  ಸೇವೆಯ  ಕಿರು ಪರಿಚಯ  ಇಲ್ಲಿದೆ              ಶ್ರೀಧರ ಸ್ವಾಮಿಗಳು  ಸಾಧಕರಾಗಿ ಸಜ್ಜನಗಡದಲ್ಲಿದ್ದಾಗ ಬೆಳಗಿನ ಜಾವ ಮೂರು ಗಂಟೆಗೆ ಎದ್ದರೆ ರಾತ್ರಿ ಹನ್ನೊಂದು ಗಂಟೆಯವರೆಗೆ ಅವಿಶ್ರಾಂತ ಗುರುಸೇವೆಯಲ್ಲಿಯೇ ಮುಳುಗಿರುತ್ತಿದ್ದರು.  ಬೆಳಿಗ್ಗೆ ಎದ್ದ ತಕ್ಷಣ ಸ್ವಲ್ಪಹೊತ್ತು ಆತ್ಮಚಿಂತನೆ ಮಾಡಿ ಶ್ರೀರಾಮ ಸಮರ್ಥರನ್ನು ಗುರುಭಾವನೆಯಿಂದ ಅಲ್ಲಿಯೇ ಅಭಿನಮಿಸುತ್ತಿದ್ದರು. ಆನಂತರ ಶ್ರೀರಾಮದೇವರ ಗರ್ಭಗುಡಿಯಮುಂದಿರುವ ಸಭಾಮಂಟಪವನ್ನು ಮತ್ತು ದೇವಸ್ಥಾನದ ಎದುರು ಗುಡಿಸಿ, ಗೋಮಯ ನೀರು ಚಿಮುಕಿಸಿ ಸ್ನಾನಕ್ಕೆ ಹೋಗುತ್ತಿದ್ದರು. ಹಾಗೆ ದೇಹಧರ್ಮಗಳನ್ನೆಲ್ಲಾ ಮುಗಿಸಿ ಸ್ನಾನಮಾಡಿ ಬರಬೇಕಾದರೆ ನಾಲ್ಕುಘಂಟೆಯಾಗುತ್ತಿತ್ತು.  ಬಂದವರ

ಎರಡು ಧ್ರುವಗಳ ನಡುವೆ (ಕತೆ )

ನನ್ನ  ಕನ್ನಡಕವನ್ನ  ತೆಗೆದು  ಕಣ್ಣೀರು  ಒರೆಸಿಕೊಂಡು ವಾರಿಜಾಳನ್ನು  ನೋಡಿದೆ.  ಶಿವರಾಮು ಹಾಗೂ  ವಾರಿಜ ಒಂದು ಕಾಲದಲ್ಲಿ   ಎಷ್ಟೊಂದು  ಹತ್ತಿರ  ಇದ್ದವರು  ನಂತರ   ಅದೆಷ್ಟು  ದೂರ ಆಗಿಬಿಟ್ಟರು! ಅವಳು ಅಲ್ಲಿ ಬೆಂಗಳೂರಿನಲ್ಲಿ  ,  ಇವನು  ಈ  ಹಳ್ಳಿಯಲ್ಲಿ   ಬದುಕನ್ನು   ಸವೆಸಿಬಿಟ್ಟರು.  ಇವತ್ತು ವಾರಿಜ  ಶಿವರಾಮುವಿಗೆ ಮತ್ತೆ  ಇಷ್ಟು  ಹತ್ತಿರದಲ್ಲಿದ್ದಾಳೆ  ಆದರೆ ಅವರು  ಮೊದಲಿನಂತೆ  ಒಂದಾಗಿರಲು   ಸಾಧ್ಯವಿಲ್ಲ,  ಯಾಕೆಂದರೆ  ಶಿವರಾಮು ಕಣ್ಣೆದುರಿಗಿನ  ಚಿತೆಯಲ್ಲಿ  ಸುಟ್ಟು ಬೂದಿಯಾಗುತ್ತಿದ್ದಾನೆ!  ಇದಕ್ಕೆಲ್ಲ  ಸಾಕ್ಷಿಯಾಗಿ ನಾನು  ನಿಂತಿದ್ದೇನೆ!!  ಹೀಗೆಲ್ಲ  ಯೋಚಿಸುತ್ತ  ಕಣ್ಣೆದುರಿಗೆ   ಧಗಧಗಿಸುತ್ತಿದ್ದ  ಬೆಂಕಿ  ಜ್ವಾಲೆಯನ್ನೇ  ನೋಡುತ್ತಾ  ನಿಂತಿದ್ದೆ .ವಾರಿಜ ಕೂಡ  ತದೇಕಚಿತ್ತವಾಗಿ  ಚಿತೆಯನ್ನೇ  ನೋಡುತ್ತಾ  ನಿಂತಿದ್ದಳು.ಎಲ್ಲವೂ  ಮುಗಿದು ಹೋಗಿ  ಕಣ್ಣೀರಷ್ಟೇ ಆಕೆಯಲ್ಲಿ  ಉಳಿದಿತ್ತು. ನಮ್ಮ  ಕಣ್ಣೆದುರಿಗೆ   ಉರಿಯುತ್ತಿದ್ದ   ಬೆಂಕಿ ಮಾತ್ರ  ಯಾವ  ಭಾವನೆಗಳ  ತಾಕಲಾಟವೂ  ಇಲ್ಲದೆ ತನ್ನ  ಪಾಡಿಗೆ  ತಾನು    ನಮ್ಮ  ಬದುಕಿನ  ಭಾಗವಾಗಿದ್ದ  ಶಿವರಾಮುವನ್ನು  ನಮ್ಮ ಪಾಲಿನ  ನೆನಪಾಗಿ  ಬದಲಾಯಿಸುತ್ತಿತ್ತು.                       **********                ನಾನು ಹಾಗೂ  ಶಿವರಾಮು ಗೆಳೆಯರು  ಎಂದಷ್ಟೇ  ಹೇಳಿದರೆ  ಅದು  ನಮ್ಮ  ಸಂಬಂಧವನ್ನು ಸರಿಯಾಗಿ  ತಿಳಿಸಿದಂತೆ  ಆಗುತ್ತದೆ  ಎಂದು  ನನಗ