ಪೋಸ್ಟ್‌ಗಳು

ಹೇಳು.

ತೇಲುವ ಮೇಘದ ಮೇಗಡೆಯೆಲ್ಲೋ ಅಡಗಿಹೆಯಾ ನೀನು? ನೀ ಹನಿಯಾಗಿ ಇಳಿಯುವೆಯೆಂದು ಕಾಯುತಿಹೆ ನಾನು. ನೀ ಸೂಸಿದರೆ ಹೂನಗೆಯನ್ನು ಹೂವಿಗೂ ನಗುವುಂಟು, ನಿನ್ನಯ ಕಂಗಳ ಬೆಳಕನು ಕಂಡರೆ ರವಿಗೂ ಹೊಳಪುಂಟು. ನಿನ್ನಯ ದನಿಯ ಮಧುರತೆಯೆದುರು ಕೋಗಿಲೆಗೆಣೆಯುಂಟೆ? ನನ್ನೀ ಕಲ್ಪನೆ ಹಿಂದೆ ತುಂಬಿಹ ಪ್ರೀತಿಗೆ ಕೊನೆಯುಂಟೆ?

ಎದೆಯಾಳದಿಂದ......

ತಡಕಾಡಿ ಪದಗಳಿಗೆ ಬರೆದೆ ಈ ಕವನ . ತಡೆ ತಡೆದು ಹೊಸತೊಂದು ಭಾವ ಸ್ಪುರಣ . ಸಂತಸದ ಮತ್ತಿನಲಿ ಹೆಚ್ಚೇನು ಹೇಳಲಿ ? ಹೇಳು , ನೀ ಎಂದು ಬರುವೆ ನನ್ನೀ ಬಾಳಲಿ ? ಹೇಳುವರು ಅವರು ನೀ ನನ್ನಲೊಂದು ಬಹು ಹಳೆಯಕಾಲದಿಂದ, ಮುಂದೂನು ಹೀಗೆ ಇರುವುದಂತೆ ಈ ನಮ್ಮ ಸಂಬಂಧ. ಆ ಹಿಂದೂ ಮುಂದು ನನಗೀಗ ಬೇಡ ,ನಾ ಕಾಣಲಿಲ್ಲವಲ್ಲ! ಈ ದಿನವೇ ಸತ್ಯ ,ಅದರಲ್ಲೇ ನಿತ್ಯ ನನ್ನ ಪ್ರತೀಕ್ಷೆಯೆಲ್ಲ. ನೀನೆಲ್ಲೇ ಇರಲಿ,ನೀ ಹೇಗೆ ಇರಲಿ ನನಗಿಲ್ಲ ಅದರ ಚಿಂತೆ, ಕಪ್ಪಾದರೇನು? ಬಿಳುಪಾದರೇನು? ಒಂದೊಂದು ಬಣ್ಣದಂತೆ. ಕೊಟ್ಟಾದಮೇಲೆ ಮನಸನ್ನು ನಿನಗೆ ಕಿತ್ತಿಡಲು ಸಾಧ್ಯವೇನು? ಮನದಲ್ಲೇ ಹೀಗೆ ಬಿಕನಾಸಿಯೆಂದು ನೀ ನನ್ನ ತಿಳಿದೆಯೇನು? ಹೇಳುವೆನು ಕೇಳು ನಾ ಇಲ್ಲೇ ಹೀಗೆ ಮಾತಲ್ಲ ನನ್ನ ಗೀಳು. ಕೈ ಹಿಡಿದ ಮೇಲೆ ಬಿಡಲಾರೆ ನಾನು ಕೊನೆವರೆಗೂ ಜೋಡಿ ಬಾಳು. ಕೇಳುವೆನು ನಾನು ನಿನ್ನಲ್ಲಿ ಒಂದು ತಪ್ಪೇನು ಇಲ್ಲ ತಾನೇ? ಬರುವವಳೇ ನೀನು ಆಗಿರಲೆಬೇಕು ಬಂಗಾರಗುಣದ ಕನ್ಯೆ.

ಭ್ರಾಂತ ಏಕಾಂತ

ಕತ್ತಲ ರಾತ್ರಿಯ ನೀರವ ಮೌನದಿ ನೆನಪಾಗಿಹೆ ನೀನು. ಕಣ್ಣನು ಮುಚ್ಚಲು ಮೌನವ ಸೀಳಿ ನುಡಿಯುವೆ ಏನೇನೋ. ಕಂಠದ ಮಧುರತೆ ಮತ್ತೇರಿಸುತಿದೆ, ತೇಲುತಿಹೆ ನಾನು. ಎದುರಿಗೆ ಬಾರದೆ ಕಾಡುವೆ ಹೀಗೆ ,ಕಾರಣ ಹೇಳಿನ್ನು. ಕಣ್ಣನು ಮುಚ್ಚಲು ನನ್ನೆಡೆ ಬಂದು ಸೂಸುವೆ ಹೂ ನಗೆಯ, ಕಣ್ಣಲೆ ಹೇಳುವೆ ನೋಡುತ ನನ್ನನೆ ಏನೋ ಭಾವನೆಯ. ಭಾವನೆ ಅರ್ಥವ ಅರಿಯಲಾಗದೆ ನಾ ಪದುತಿಹೆ ಯಾತನೆಯ, ಕರೆಯಲೇ, ನಿನ್ನನು ಭ್ರಾಂತಿಯ ತುಂಬಿ ಕಾಡುತಿಹ ಮಾಯಾ?

ನನ್ನ ಕವನ

ನನ್ನ ಕವನ ಬರೀ ಕವನವಷ್ಟೇ, ಮತ್ತೇನಲ್ಲ. ಬರೆದದ್ದಕ್ಕೆಲ್ಲ ಏನಿರುತ್ತದೆ ವಿಶೇಷ? ನನ್ನ ಸಾಲುಗಳು ಕ್ರಾಂತಿಕಾರಿಯೇನಲ್ಲ, ಸುಧಾರಣೆ ಮಾಡಲು ಶಕ್ತವಲ್ಲ. ಮಳೆಗಾಲದಲ್ಲಿದ್ದು ಬೇಸಿಗೆಯಲ್ಲಿ ಮಾಯವಾಗುವ ಸಣ್ಣ ತೊರೆಯಂತೆ ಈಗ ಇದೆ, ಈಗ ಇಲ್ಲ. ಮನವೆಲ್ಲೋ ಕುಣಿದಾಗ ಅಥವಾ ಜಂಜಡ ದಿಂದ ದಣಿದಾಗ ನನ್ನೊಳಗಿಂದ ಬರುತ್ತದೆ.ಎಲ್ಲಿಂದ? ಗೊತ್ತಿಲ್ಲ. ಧುಮ್ಮಿಕ್ಕುತ್ತದೆ ಜಲಪಾತದಂತೆ, ಏನು ಹೇಳಲಿ ನನ್ನ ಪಾಡು ತತ್ತರಿಸಿಹೊಗುತ್ತೇನೆ ನಾನು. ಮರುಕ್ಷಣವೆ ಮಾಯ , ಮನ ತೊಯ್ದ ನೆಲದಂತೆ. ಅಬ್ಬರವಿಲ್ಲ,ಆದ್ರೆ ಒಳಗೆಲ್ಲ ತಂಪು. ಕೆಲವು ಪದಗಳ ಸಾಲು ಅದು. ತೂಕವೆನಿಲ್ಲ. ಗಾಳಿ ಗುಳ್ಳೆಯಂತೆ. ಅದಕ್ಕೆಲ್ಲಾದರೂ ತೂಕವುಂಟೆ? ಸುಮ್ಮನೆ ಹಾರಾಡುತ್ತದೆ ಬಾನಗಲ. ಅದರೂ ಅದಕ್ಕೆ ಬಾನೆ ಸಾಲದು. ಸ್ವಚ್ಚಂದ ಅದು. ಮಿತಿಯಿಲ್ಲ. ಭಾರವಿದ್ದಿದ್ದರೆ ಅದು ಹಾರುತ್ತಿರಲಿಲ್ಲ. ಈಗದು ಹಾರುತ್ತದೆ ಬಹುದೂರ. ನನ್ನನ್ನೂ ಕರೆದುಕೊಂಡು........

ಇಬ್ಬಗೆಯ ನೀತಿ ಏಕೆ?

            ಇತ್ತೀಚೆಗೆ ತುಂಬಾ ಚಚಿ೯ತವಾಗಿರುವ ಗೋ ಹತ್ಯೆ ನಿಷೇದದ ಬಗ್ಗೆ ವಿಚಾರ ಮಾಡಿದಾಗ,ನಿಷೆದವನ್ನು ವಿರೋಧಿಸುವವರ ನಿಲುವಿನ ಬಗ್ಗೆ ಕೆಲವು ಪ್ರಶ್ನೆಗಳು ಮೂಡುತ್ತವೆ. ನೀವು ಗೋ ಹತ್ಯೆಯನ್ನು ಸಮರ್ಥಿಸುತ್ತೀರಿ ಎಂದಾದಲ್ಲಿ ಇತ್ತೀಚಿಗೆ ಕುಷ್ಟಗಿಯಲ್ಲಿ ನಡೆದ ಪ್ರಾಣಿ ಬಲಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು. ಪ್ರಾಣಿ ಬಲಿಯನ್ನು ವಿರೋಧಿಸುವಿರಿ ಎಂದಾದರೆ ,ಗೋ ಹತ್ಯೆಯನ್ನು ಹೇಗೆ ತಾನೇ ಸಮರ್ಥಿಸುತ್ತೀರಿ. ಸ್ವಯಂ ಘೋಷಿತ ಮಹನೀಯರೆಲ್ಲರೂ ಒಂದೇ ಮನಸ್ತಿತಿಯನ್ನು ಹೊಂದಿದ್ದಾರೆ . ಪ್ರಾಣಿ ಬಲಿಯನ್ನು ಅವ್ರು ಸುತರಾಂ ಬೆಂಬಲಿಸಲಾರರು . ಬೆಂಬಲಿಸಿದಲ್ಲಿ ಅವರು ಅಜ್ಞಾನಿ, ಅವೈಚಾರಿಕ , ಮೂಢವ್ಯಕ್ತಿ ಎಂದಾಗುತ್ತಾರೆ.ಆದರೆ ಗೋ ಹತ್ಯೆಯ ನಿಷೆಧವನ್ನು ತೀವ್ರವಾಗಿ ಖಂಡಿಸುತ್ತಾರೆ. ಇದು ಅವರನ್ನು ವೈಚಾರಿಕರನ್ನಾಗಿಯೂ, ಹೋರಾಟಗಾರರನ್ನಾಗಿಯೂ, ಜಾತ್ಯಾತೀತರನ್ನಾಗಿಯೂ ಮಾಡುತ್ತದೆ. ಒಂದೇ ರೀತಿಯ ಘಟನೆಗಳ ಮೇಲೆ ಎರಡು ವಿಭಿನ್ನ ರೀತಿಯ ಅಭಿಪ್ರಾಯಗಳು ಬರುವುದು ವ್ಯಕ್ತಿಯ ಲಜ್ಜೆಗೆಟ್ಟ ತನವನ್ನು ತೋರಿಸುತ್ತದೆ.          ಗೋ ಹತ್ಯೆ ಮಾಡುವುದು ಆಹಾರ ಪದ್ದತಿಯ ದೃಷ್ಟಿಯಿಂದ ಅನಿವಾಯ೯ ಎನ್ನುವುದಾದರೆ, ಬಲಿ ನೀಡುವುದು ಕೂಡ ಧಾಮಿ೯ಕ ಪದ್ದತಿಯ ದೃಷ್ಟಿಯಿಂದ ಅನಿವಾಯ೯ ಎಂದರೆ ತಪ್ಪಾಗುತ್ತದೆಯೆ? ಒಂದು ಸರಿ,ಇನ್ನೊಂದು ತಪ್ಪಾಗಲು ಹೇಗೆ ಸಾಧ್ಯ?.ತಪ್ಪೆನ್ನುವುದಾದರೆ ಎರಡೂ ತಪ್ಪು. ಸರಿ ಎಂದಾದರೆ ಎರಡೂ ಸರಿ. ಏಕೆಂದರೆ ಎರಡೂ