ಪೋಸ್ಟ್‌ಗಳು

ಮಹಾಭಾರತ ಕಥಾ

ಇಮೇಜ್
            'ಯದಾ ಯದಾ ಹಿ ಧರ್ಮಸ್ಯ, ಗ್ಲಾನಿರ್ಭವತಿ ಭಾರತ' ಎಂದು ಆರಂಭವಾಗಿ ' ಸಂಭವಾಮಿ ಯುಗೇ ಯುಗೇ....' ಎಂದು ಮುಗಿಯುತ್ತಿದ್ದ ಮಹೇಂದ್ರ ಕಪೂರ್ ಅವರ ಧ್ವನಿಯಲ್ಲಿದ್ದ  ಗೀತೆಯೊಂದಿಗೆ ಪ್ರಾರಂಭವಾಗುತ್ತಿದ್ದ 'ಮಹಾಭಾರತ' ಹಿಂದಿ ಧಾರಾವಾಹಿ 1988ರ ಹೊತ್ತಿಗೆ ದೇಶದಾದ್ಯಂತ ಜನಪ್ರಿಯವಾಗಿತ್ತು. ವ್ಯಾಸರ ಮಹಾಭಾರತವನ್ನಾಧರಿಸಿಯೇ ಮೂಡಿ ಬಂದಿದ್ದ ಧಾರಾವಾಹಿ ಅದು.  ಸುಮಾರು 2 ವರ್ಷಗಳ ಕಾಲ 94 ಎಪಿಸೋಡ್ಗಳಲ್ಲಿ ಪ್ರಸಾರವಾಗಿದ್ದ ಧಾರಾವಾಹಿ ಆ ದಿನಗಳಲ್ಲಿ ಅತ್ಯಂತ  ಹೆಚ್ಚು ಟಿ ಆರ್ ಪಿ ಗಳಿಸಿದ ಹೆಮ್ಮೆ ಹೊಂದಿತ್ತು.  ಧಾರಾವಾಹಿ ಪ್ರಸಾರವಾಗುತ್ತಿದ್ದ ಸಮಯದಲ್ಲಿ ರಸ್ತೆಗಳೆಲ್ಲ ಖಾಲಿಯಿರುತ್ತಿದ್ದವಂತೆ ಎಂದರೆ ಅದರ ಜನಪ್ರಿಯತೆ ಎಷ್ಟಿತ್ತು ಎಂದು ತಿಳಿಯಬಹುದು. ನಮಗೆಲ್ಲ ಟಿ ವಿ ಎಂಬುದು ಒಂದು ಮಾಯಾಪೆಟ್ಟಿಗೆಯಾಗಿ, ಸುಲಭವಾಗಿ ಕೈಗೆಟುಕದ ವಸ್ತುವಾಗಿದ್ದ ಕಾಲ ಅದು. ನನ್ನೂರಿನಲ್ಲೆಲ್ಲೂ ಟಿ ವಿ ಇರಲಿಲ್ಲ. ನಂತರದ ದಿನಗಳಲ್ಲಿ ಧಾರವಾಹಿಯ ಬಗ್ಗೆ ಕೇಳಿ ಕುತೂಹಲಿಯಾಗಿದ್ದ ನಾನು ನೋಡಬೇಕೆಂದುಕೊಂಡಿದ್ದೆ . ಈಗ ಸಂಪೂರ್ಣ ಧಾರವಾಹಿಯ ಎಂಟು ಡಿವಿಡಿಗಳನ್ನು ನೋಡಿದ ಮೇಲೆ ಖಂಡಿತವಾಗಿಯೂ ' ಮಹಾಭಾರತ' ಧಾರಾವಾಹಿ ಒಂದು ಅದ್ಭುತ ನಿರ್ಮಾಣ ಎನ್ನಿಸುತ್ತಿದೆ.             ಈ ಧಾರಾವಾಹಿ ಹಾಗೂ ರಮಾನಂದ ಸಾಗರ್ ಅವರ ರಾಮಾಯಣ ಇವೆರಡೂ ನಿರ್ಮಾಣವಾಗಲ...

ಪ್ರವಾಹ ನದಿಯಲ್ಲ. ...

ಸೊಕ್ಕಿನಲಿ  ಉತ್ಕಂಟ ಕಿರುಚಾಟ ಮಾಡುತ್ತ ಮೈ ತುಂಬಿ ಮುನ್ನಡೆದು ಶರವೇಗದಿಂದುರುಳಿ ಪಥದಿ ಸಿಕ್ಕೆಲ್ಲವನು ದಯೆಯಿಲ್ಲದೆಳೆದೊಯ್ದು ಪ್ರತಿಯೊಬ್ಬರೆದೆಯಲ್ಲು ಭಯ ಭೀತಿಗಳ ಬಿತ್ತಿ ಸಾಗುವ ಪ್ರವಾಹ ನದಿಯಲ್ಲ.... ಈಗ ಅಳಿದೇನೆಂಬ ಅರಿವೆಯೇ ಇಲ್ಲದೆ ಅಳಿಸುತ್ತಿರುವೆ ಎಂಬ ಕಲ್ಪನೆಯು ಇಲ್ಲದೆ ಒಡಲಲ್ಲಿ ಕಸಕಡ್ಡಿ ವ್ಯರ್ಥವನೆ ಒಯ್ಯುತ್ತ ವಿನಾಶಕ್ಕಿಂತ ಹೆಚ್ಚೇನು ಸಾಧಿಸದೆ ಸಾಗುವ ಪ್ರವಾಹ ನದಿಯಲ್ಲ.... ತನ್ನನ್ನೆ ಆಧರಿಸಿ ತನ್ನನ್ನೆ ಸತ್ಕರಿಸಿ ತನ್ನನ್ನೆ ನಂಬಿ ಕನಸುಳ ಕಟ್ಟಿ ಬಾಳ್ವೆಯಲಿ ಸಾಗಿರುವ ಜನರ ಕಣ್ಣುಗಳಲ್ಲಿ ಶೋಕ ವಿಷಾದ ಸಂಕಟವ ತುಂಬುತ್ತ ಸಾಗುವ ಪ್ರವಾಹ ನದಿಯಲ್ಲ. ... ಜೀವ ಜಲವನು ನೀಡಿ ಜೀವಿ ಸಂಕುಲಕೆಲ್ಲ ತನ್ನ ಪಾತ್ರವನೆಲ್ಲ ಫಲಪೂರ್ಣ ಮಾಡಿ ಕೊನೆ ಸೇರುವಲ್ಲಿ ಧನ್ಯತೆಯ ತಳೆಯುವ ಶಾಂತ ನದಿ ಕ್ಷಣಕಾಲ ಉನ್ಮತ್ತವಾಗಿ ಸಾಗುವ ಪ್ರವಾಹ ನದಿಯಲ್ಲ. ...

ಹೆಣಗಾಟ...

ಸುತ್ತಮುತ್ತಲು ದಟ್ಟ ಕತ್ತಲು ಮೌನ ತಬ್ಬಿದೆ ಇರುಳನು ಜೀರಿಡುವ ಜೀರುಂಡೆ ಕರ್ಕಶ ಕೊಯ್ಯುತಿದೆ ಮೌನದ ಕೊರಳನು ಅಜ್ಞಾತವಾಗಿಹ ಕದವ ತೆರೆದು ಮನದೊಳಗೆ ಕೋಲಾಹಲ ಮರೆತೆ ಹೋದ ನೆನಪುಗಳಿಗೆ ಹೊರಬಂದು ಕಾಡು...

ಚಿಗುರಿದಾಗ. ...

ನೀನು ಹೇಳಲೆ ಇಲ್ಲ ನಾನು ಕೇಳಲೆ ಇಲ್ಲ ಆದರೂ ಚಿಗುರಿಹುದು ಈ ಪ್ರೀತಿಯು ಅದು ನಿನಗು ತಿಳಿದಿಹುದು ನನಗದರ ಅರಿವಿಹುದು ನೋಡೆಂತ ವೈಚಿತ್ರ್ಯ ಈ ರೀತಿಯು. ಮಾತುಗಳು ಇದ್ದರೂ ಇದರ ಸುದ್ದಿಯೆ ಇಲ್ಲ ಏನೇನೋ ಮಾ...

ಮತ್ತೆ ಪರಿತಾಪವೊಂದೇ......

ಹೊತ್ತು ಮುಳುಗುವ ಮುನ್ನ ಮಾಡಿಬಿಡು ಕೆಲಸಗಳ ಇಲ್ಲದಿದ್ದರೆ ಮತ್ತೆ ಅವಕಾಶ ಸಿಗದು ತಂದೆ ತಾಯ್ಗಳ ಸೇವೆ ಇಂದೆ ನೀ ಮಾಡು ನಾಳೆ ನಿನಗಾ ಭಾಗ್ಯ ಸಿಗುವ ಭರವಸೆಯಿಲ್ಲ. ಗರ್ಭದಲಿ ನೀನಿರುವೆ ಎಂದು ತಿಳಿದಾ ಕ್...

ಮನವಿ ನಿನಗೆ......

ಇಮೇಜ್
ಮನದಲಿ ಸ್ವಲ್ವವೆ ಸುಳಿದಾಡು ಹೃದಯದಿ ಸ್ವಲ್ಪವೆ ನಲಿದಾಡು ಮನಸಿನ, ಹೃದಯದ ಸ್ಪಂದನೆಯಿಂದ ನಾ ಪಡೆಯುವೆ ಅಮಿತಾನಂದ ನೀ ಬರಲೇಬೇಕೆನ್ನುವ ಕಾತರ ಎಂದಿಗೆ ಬಂದೀಯೆನ್ನುವ ಆತುರ ಕಾದರು ಬಾರದೆ ಕಾಡುವುದೇತ...

ಕರುಣೆಸುಧೆ..

ಇಮೇಜ್
ಕಾಯವಳಿದು ಹೋದರೇನು ಖ್ಯಾತಿಯಳಿಯದು ಕರುಣೆ ಸುಧೆಯ ಕಡಲಿಗಿರುವ ಒರತೆ ಬತ್ತದು ಕಂಡರೆಷ್ಟೋ ಜನರು ಅಂದು ತಮ್ಮ ಕಣ್ಣಲೆ ಮರುಕದಿಂದ ತೋರಿದಂತ ಮಹಿಮೆ ಹಲವನು ಮಿಂದರೆಷ್ಟೋ ಜನರು ಆನಂದ ಕಡಲಲೆ ಪಡೆದ ಕ್ಷಣವೆ ದಿವ್ಯವಾದ ಪರಮಕೃಪೆಯನು ತನುವು ಮನವು ತಲುಪದಂತ ಗಮ್ಯವಾವುದೋ ಅದರ ಮೂಲ ತಲುಪಿ ನೀನು ಸರ್ವವ್ಯಾಪಿಯು ಧನವು ತಪವು ಒಂದುಗೂಡಿ ಸಾಗುತಿರುವುದು ಭಕ್ತ ಜನರ ಬೇಗೆ ತಡೆವ ಧರ್ಮ ಕಾರ್ಯವು ಅಂದು ಇಂದು ಎಂದೆಂದಿಗೂ ಒಂದೆತರದಲಿ ಸ್ವಾನಂದದ ಅಮೃತವನ್ನು ಪಾನ ಮಾಡುತ ಶರಣು ಎಂದು ಬಂದ ಜನರ ಕರುಣೆಯಿಂದಲಿ ಕೃಪೆಯ ತೋರಿ ಮೈಯದಡವಿ ಪೊರೆವೆ ಸಂತತ ಶೃತಿಯು ಸ್ಮತಿಯು ಸಾರಿ ನುಡಿವ ನುಡಿಗಳೆಲ್ಲವು ನಿನ್ನದೆಂಬ ಮಾತು ನೀನು ನುಡಿದು ತಿಳಿದೆನು ಕೈಯ ಮುಗಿವೆ ನಿನಗೆ ನಾನು ಶರಣು ಎನ್ನುತ ನಿತ್ಯ ಸತ್ಯ  ನೀನು ಎಂಬದೆನ್ನ ಹೃದ್ಗತ. ಸದ್ಗುರು ಭಗವಾನ್ ಶ್ರೀಧರಸ್ವಾಮಿಗಳು, ವರದಹಳ್ಳಿ