ಪೋಸ್ಟ್‌ಗಳು

ಕಾಲ-ಯಾನ

ಕಣ್ಣಿಗೆ ಕಾಣದೆ ಸಾಗುತಲಿರುವ ಅದೃಶ್ಯ ಪಯಣಿಗ ಕಾಲ ಸಾಗಿದೆ ಇಲ್ಲಿಂದಲ್ಲಿಗೆ ಆದರೂ ಇಲ್ಲ ಕಾಲೂ ಬಾಲ. ನೂರಾಸೆಗಳ ಕುದುರೆಯ ಹತ್ತಿ ಹಿಡಿತವೆ ಇಲ್ಲದೆ ಸಾಗುತಲಿಹೆವು ಸರಿಯುತಲಿಹ ಈ ಕಾಲದ ಜೊತೆಯಲೆ ಎತ್ತೆತ್ತೆತ್ತಲೊ ಹೋಗುತಲಿಹೆವು. ಕಾಲದ ಜೊತೆಯಲೆ ಕಾಲವ ಕಳೆದು ಕಳೆದೇ ಹೋದರೂ ನಾವು ಈ ಕಾಲದ ಕಾಲಿಗೆ ಸುಸ್ತೂ ಇಲ್ಲ ಕಾಡುವುದಿಲ್ಲ ನೋವು ನಿಲ್ಲದೆ ಸಾಗುತ ಹೋಗುವುದೆಲ್ಲಿಗೆ ? ನಿಲ್ಲಯ್ಯ ನೀ ಕೊಂಚ ಎಂದರೂ ಕಾಲಕೆ ನಿಲುಗಡೆಯಿಲ್ಲ ಯಾಕೋ ಈ ದಾವಂತ!?

ಎದೆಯೊಳಗಿನ ಮಳೆ.....

ಭೋರ್ಗರೆವ ಮಳೆ ನನ್ನೊಳಗೆ ಬೆಚ್ಚನೆ ಮುಚ್ಚಿಹ ಪದರನು ಸಡಿಲಿಸಿ ಒಳಗಣ ನೆನಪನು ಕೆದಕುತಿದೆ ನೂರಾಸೆಯ ಒಡಲನು ತಟ್ಟುತಿದೆ ಭಿರುಬೀಸಿನ ಈ ಮಳೆಯ ಆರ್ಭಟಕೆ ಮನದ ಸಂಯಮವೆ ಹಾರುತಿದೆ ಸಶಕ್ತವಲ್ಲದ ಕದವನು ಒಡೆದು ಮನದೊಳಗೆಯೆ ಜಲ ನುಗ್ಗುತಿದೆ ತಲೆ ಎತ್ತಿದ ಹಳೆ ನೆನಪುಗಳೆಲ್ಲ ಹೊಸದೆಂಬಂತೆಯೆ ತೋರುತಿವೆ ಬಣ್ಣ ಬಣ್ಣದಲಿ ಕಂಗೊಳಿಸುತ ಇವು ರಂಗಿನ ಲೋಕವ ಸೃಷ್ಟಿಸಿವೆ ನೆನಪುಗಳಾಳದ ಬೇರಿನ ಅಂಚಲಿ ಆಸೆಗಳೆಷ್ಟೋ ಚಿಮ್ಮುತಿವೆ ಚಿಮ್ಮುವ ಆಸೆಯ ಹೊಮ್ಮುವ ಪ್ರವಾಹ ನನ್ನನೆ ಎಲ್ಲಿಗೊ ಒಯ್ಯುತಿದೆ.

ಮಧುರ ನೆನಪಲಿ....

ಮರೆತೆ ಹೋಗದು ಭಾವಕೊಲಿದಿಹ ಮಾತಿಗೊಲಿಯದ ಪದಗಳು ಸ್ವಚ್ಛವಾಗಿಯೆ ಮೂಡಿ ಬಂದಿಹ ನುಡಿಯಲಾಗದ ನುಡಿಗಳು ಮೌನದಲಿ ಸವಿ ಸವಿಯಬೇಕಿಹ ಸಿಹಿಯ ಮೀರಿದ ಸಿಹಿಯದು ಕಿವಿಯ ತಲುಪದು ಹೃದಯ ಕೇಳುವ ಹೃದಯಗಾನದ ಸವಿಯದು ಯಾವ ಕಾರಣವೆಂಬುದಿಲ್ಲದೆ ಮೂಡಿ ಬಂತೆಲೆ ಸುಮ್ಮನೆ ಬಂದು ಹೋಗುತ ನೀಡಿ ಹೋಗಿದೆ ಮರೆಯಲಾರದ ನೆನಪನೆ ಇಂದು ಕುಳಿತೆಡೆ, ಒರಗಿ ಕೊಂಡೆಡೆ ನೆನಪಾಯ್ತು  ಆ ಹಿತ ಒಮ್ಮೆಲೆ ನುಡಿಯಲಾರದೆ ಪದಗಳಲಿ ಹಿತವನು ನಗು ನಗುವೆ ಸುಕಾಸುಮ್ಮನೆ

ರಂಗ ವಿಚಾರ (ಕಥೆ)

ಇಮೇಜ್
        'ಶ್ರೀ......ಗುರುಗಣಾಧಿಪತಯೇ......... ನಮಃ....... ಸಕಲ ಕಾರ್ಯ........ವಿಜಯೀ ಭವ..........' ಕಂಚಿನ ಕಂಠದಲ್ಲಿ ಈ ಗಾನ  ಕೇಳಿಬರುತ್ತಲೇ ಗುಜುಗುಜು ಸದ್ದಿನ ಜನಸ್ತೋಮವೆಲ್ಲ ಸ್ತಬ್ಧವಾಯಿತೆಂದೇ ಅರ್ಥ.  ಆ ಧ್ವನಿಗೆ  ಮಂತ್ರ ಮುಗ್ಧನಾಗದ ಯಕ್ಷಗಾನ ಪ್ರೇಮಿಯೇ ಇಲ್ಲ. ಆ ಅದ್ಭುತ ಕಂಠವನ್ನು ಆಲಿಸದ ಯಕ್ಷಪ್ರೇಮಿ ಯಾರಾದರೂ ಇದ್ದಾನೆಂದು ಹೇಳಿದರೆ ಆತ ನಿಜವಾದ ಯಕ್ಷಾಭಿಮಾನಿಯೇ ಅಲ್ಲ ಎನ್ನುವುದು ನನ್ನ ಅಭಿಮತ. ಎತ್ತರದ ಧ್ವನಿಯಲ್ಲಿ ಒಂದು ಸ್ವಲ್ಪವೂ ಕೊಂಕಿಲ್ಲದಂತೆ ಹಾಡುತ್ತಾ ವಿವಿಧ ಮಜಲುಗಳಲ್ಲಿ ತೆರೆದುಕೊಳ್ಳುವ  ಆ ಶೈಲಿಯೇ ಅನುಪಮ. ಯಕ್ಷಲೋಕದ ಹಲವು ತಾರೆಗಳಲ್ಲಿ ಈ ಧ್ವನಿಯ ಗಾರುಡಿಗನನ್ನು ದ್ರುವತಾರೆ ಎಂದು  ಕರೆಯುವುದರಲ್ಲಿ ಯಾವುದೇ ಅತಿಶಯ ಇಲ್ಲ ಎಂಬುದು  ಅವರ ಭಾಗವತಿಕೆಯನ್ನು ಕೇಳಿದ ಪ್ರತಿಯೊಬ್ಬನಿಗೂ ಅನ್ನಿಸುವ ಪ್ರಾಮಾಣಿಕ ಅನಿಸಿಕೆ. ನಾನು ಯಾರ ಬಗ್ಗೆ ಬರೆಯುತ್ತಿದ್ದೇನೆ ಎಂದು ಈಗಾಗಲೇ ತಿಳಿದಿರಬೇಕಲ್ಲ...ಹೌದು ನಾನು ಬರೆಯುತ್ತಿರುವುದು  ಗುಜ್ಜೂರು ರಾಮ ಭಂಡಾರಿಯವರ ಬಗ್ಗೆಯೇ.              ನನಗೆ ಯಕ್ಷಗಾನದ ಖಯಾಲಿ ತುಂಬಾ ಇದೆ. ಆಗೀಗ ಅಲ್ಲಿಲ್ಲಿ ಸಣ್ಣ ಪುಟ್ಟ ವೇಷಗಳನ್ನು ಹಾಕಿದ ಉದಾಹರಣೆಗಳೂ ಇವೆ. ಈ ಘಟ್ಟದ ಕೆಳಗಿನ ಪ್ರದೇಶದವರಿಗೆ ಯಕ್ಷಗಾನದಲ್ಲಿ ಆಸಕ್ತಿಯಿರುವದು ಒಂದು ವಿಶೇಷವೆನಲ್ಲ. ಹಾಗಾಗಿ ನನಗೆ ಯಕ್ಷಗಾನದಲ್ಲಿ ಆಸಕ್ತಿ ಇರುವುದರಲ್ಲಿ ದೊಡ್ಡಸ್ತಿಕೆಯೇನೂ ಇಲ್ಲ. ನನ್ನ ಊರಿನ ಆಸ

ಬೆಳಕು ಬಿದ್ದೊಡನೆ (ಕಥೆ )

ಇಮೇಜ್
      ಸು ತ್ತಲೂ ದಟ್ಟ ಕಾಡು. 'ಟಿರ್..ಟಿರ್....ಟಿರ್...ಟಿರ್' ರಸ್ತೆಯ ಅಕ್ಕಪಕ್ಕದ ಮರಗಳಿಂದ ಹುಳಗಳು ಮಾಡುತ್ತಿದ್ದ ಸದ್ದು ರಾತ್ರಿಯ  ಮೌನವನ್ನು ಸೀಳಿ ಕಿವಿಗೆ ತಾಗುತ್ತಿತ್ತು.  ಕಾಡಿನ ಮಧ್ಯೆ ಅಂಕುಡೊಂಕಾಗಿ ಹಾದುಹೋಗಿದ್ದ ನಿರ್ಜನವಾದ ಕಚ್ಚಾ ರಸ್ತೆಯಲ್ಲಿ  ಅವರಿಬ್ಬರೂ ಸರಸರನೆ ಹೆಜ್ಜೆ ಹಾಕುತ್ತಾ ಮುಂದೆ ಸಾಗುತ್ತಿದ್ದರು. ತುಂಬಾ ದೂರದಿಂದ ನಡೆಯುತ್ತಿದ್ದುದರಿಂದ ಆ ತಂಗಾಳಿ ತೀಡುತ್ತಿದ್ದ ವಾತಾವರಣದಲ್ಲೂ ಅವರ ಮೈಯೆಲ್ಲ ಬೆವರಿತ್ತು. "ಇನ್ನೆಷ್ಟು ದೂರ ನಡೀಬೇಕು?" ನಡೆನಡೆದು ಆಯಾಸಗೊಂಡಿದ್ದ ಲಕ್ಷ್ಮಣ ಕೇಳಿದ. "ಇನ್ನು ಸ್ವಲ್ಪವೇ ದೂರ, ಮನೆ ಬಂದೇ ಬಿಡುತ್ತದೆ" ಈಗಾಗಲೆ ಮೂರು ನಾಲ್ಕು ಬಾರಿ ಹೇಳಿದ್ದನ್ನೇ ಮತ್ತೆ ಹೇಳಿದ ಮಂಜಯ್ಯ. "ಇದನ್ನೇ ಆವಾಗಿನಿಂದ ಹೇಳುತ್ತಾ ಇದ್ದೀಯ. ನಿನಗಾದರೂ ಗೊತ್ತಿದೆಯೋ ಇಲ್ವೋ ನಿಜವಾಗಿಯೂ ಎಷ್ಟು ದೂರ ಅಂತ" ಕೇಳಿದ  ಲಕ್ಷ್ಮಣ.  " ಹಗಲಲ್ಲಾದರೆ ದಾರಿ ಸಾಗಿದ್ದೇ ಗೊತ್ತಾಗೋದಿಲ್ಲ ಎಷ್ಟು ದೂರ ಬಂದು ತಲುಪಿದ್ದೀವಿ ಅಂತ ಆರಾಮಾಗಿ ಗೊತ್ತಾಗ್ತದಪ್ಪ. ಈ ರಾತ್ರಿಯಲ್ಲಿ ಹೇಗೆ ಹೇಳೋದು? ಕೈಯ್ಯಲ್ಲಿರೊ  ಲಾಟೀನಿನ ಬೆಳಕಲ್ಲಿ ಮುಂದೆರಡು ಮಾರು ಬಿಟ್ಟು ಬೇರೆನು ಕಾಣ್ತದೆ? ಅಂದಾಜು ಮೇಲೆ ಮಾತಾಡ್ತಾ ಇದ್ದೀನಿ.   ಬಾ ಇಲ್ಲೇ ಸ್ವಲ್ಪ ದೂರ ಹೋದರೆ ಆಯ್ತು" ಸರಸರನೆ ನಡೆಯುತ್ತಲೇ ಇರುವ ಸಮಸ್ಯೆಯನ್ನು ಹೇಳಿದ ಮಂಜಯ್ಯ.         ಲಾಟೀನಿನ ಬೆಳಕನ್

ಸವೆದ ಕಲ್ಲಿನ ಹಿಂದೆ (ಕಥೆ)

ಇಮೇಜ್
     ವೀರಗಲ್ಲು ಸಾ ಗರದಿಂದ ರೈಲ್ವೇ ಹಳಿಯ ಮೇಲೆಯೇ ತಾಳಗುಪ್ಪ ಕಡೆಗೆ   ಸುಮಾರು 8 ಕಿ ಮಿ ನಡೆದರೆ ನಿಮಗೆ ಸಿಗುವ  ರೈಲ್ವೆ ನಿಲ್ದಾಣದಲ್ಲಿ 'ಕಾನಲೆ' ಎಂದು ದೊಡ್ಡ ಫಲಕದಲ್ಲಿ ಬರೆದಿರುವುದು ಗೋಚರಿಸುತ್ತದೆ. ಅದರರ್ಥ ನೀವೀಗ ಕಾಣುತ್ತಿರುವುದು ಕಾನಲೆ ಊರಿನ ರೈಲ್ವೇ ನಿಲ್ದಾಣ. ಬ್ರಿಟೀಷರ ಕಾಲದ ಈ ರೈಲು ಮಾರ್ಗ ಈಗ ಬ್ರಾಡ್ ಗೇಜ್ ಆಗಿ ಪರಿವರ್ತನೆಯಾಗಿದೆ. ಹಿಂದೆ  ಇಲ್ಲಿ ಒಂದು ಸಣ್ಣ ರೈಲು ನಿಲ್ದಾಣ ಇತ್ತು ಮತ್ತು ರೈಲು ನಿಲುಗಡೆಯೂ ಇತ್ತು. ಈಗ ಇಲ್ಲಿ ಹೊಸ ರೈಲು ನಿಲ್ದಾಣ ಮಾಡಲಾಗಿದೆ ಹಾಗೂ ಈ ನಿಲ್ದಾಣದಲ್ಲಿ ಯಾವುದೇ ರೈಲನ್ನೂ ನಿಲ್ಲಿಸುತ್ತಿಲ್ಲ! ಆ ನಿಲ್ದಾಣದಲ್ಲಿ  ನೀವು ಸಾಗಿ ಬಂದ  ಕಡೆಯಿಂದಲೇ ಬಲಕ್ಕೆ ನೋಡಿದರೆ ಸಾಗರದಿಂದ ಬಂದಂತಹ ಡಾಂಬರು ಹಾದಿಯೊಂದು ರೈಲ್ವೆ ಮಾರ್ಗವನ್ನೇ ದಾಟಿ ಮುಂದುವರೆದಿರುವುದು ಕಾಣುತ್ತದೆ. ಅದು ಮಂಡಗಳಲೆ, ಕಾಗೋಡು, ಮಾಸೂರಿನ ಮೂಲಕ ಸೊರಬ ಸೇರುತ್ತದೆ. ಅಲ್ಲದೆ ಆ ಹಾದಿಯ ಬಲಕ್ಕೆ  ತೆರೆದುಕೊಳ್ಳುವ ದಾರಿಯಲ್ಲಿ ಮುಂದುವರೆದರೆ ನಿಮಗೆ ಸಿಗುವುದು ವರದಾನದಿ. ಅದರಾಚೆ ಇರುವ ಅದರಂತೆ ಊರನ್ನು ದಾಟಿ ನಾಲ್ಕಾರು ಕಿಲೋಮಿಟರುಗಳಲ್ಲಿ ಇತಿಹಾಸ ಪ್ರಸಿದ್ಧ ಕೆಳದಿ ಊರಿಗೆ ನೀವು ತಲುಪುತ್ತೀರಿ.  ನಿಲ್ದಾಣದಿಂದ ಎಡಕ್ಕೆ ನೋಡಿದರೆ  ಹಸಿರು ಹುಲ್ಲಿನ ಚಿಕ್ಕ ಬಯಲು ಹಾಗೂ ನಡುವಲ್ಲಿಯೇ ಇರುವ, ಸಾಗರದಿಂದ ಬಂದ ಡಾಂಬರು ರಸ್ತೆ ಹಾಗೂ ಡಾಂಬರು ರಸ್ತೆಯ ಬಲಕ್ಕೆ ತಿರುಗಿ ಕಾನಲೆ ಊರೊಳಕ್ಕೆ ಸಾಗುವ ಮಣ್ಣು

ಸಾಗಿ ಬಂದ ತೀರ ( ಕಥೆ )

ಇಮೇಜ್
          ಶ ರತ್ಚಂದ್ರ  ಕಾಫಿ ಹೀರುತ್ತಾ ಕುರ್ಚಿಯಲ್ಲಿ  ಕುಳಿತಿದ್ದ ಬಲಗೈಯಲ್ಲಿ ಯಾವುದೋ ಪುಸ್ತಕ  ಇತ್ತು. ತುಂಬಾ ಆಳವಾಗಿ ಅದರಲ್ಲಿಯೇ ಮುಳುಗಿದ್ದ. "ಮಾಮ...ಮಾಮ...ಇಲ್ನೋಡು" ಕುಣಿ ಕುಣಿಯುತ್ತಾ ಬಂದ ಶಾಶ್ವತಿ ಶರತ್ಚಂದ್ರನ ತೊಡೆಯಮೇಲೆಯೇ ಕುಳಿತಳು. " ಇದೇನು ಪುಟ್ಟಿ, ಇದೆಲ್ಲಿಂದ ತಂದೆ ಲೋಟನ? ಅಮ್ಮ  ಏನಾದ್ರೂ ತರೊದಕ್ಕೆ ಲೋಟ ಕೊಟ್ಟು ಕಳಿಸಿದ್ರ" ಶರತ್ಚಂದ್ರ ಸಹಜವಾಗಿಯೇ ಕೇಳಿದ ಆಕೆಯನ್ನು ದಿಟ್ಟಿಸುತ್ತ. " ಇಲ್ಲ ಮಾಮ, ಇದು ನಂಗೆ ಬಹುಮಾನ ಬಂದ ಲೋಟ. ಇವತ್ತು ನಾನು ಹಾಡಲ್ಲಿ ಫಸ್ಟ್ ಬಂದೆ. ಅದಕ್ಕೆ ಕೊಟ್ಟಿದ್ದು" ಹೆಮ್ಮೆಯಿಂದ ತೋರಿಸುತ್ತ ಹೇಳಿದಳು. "ಹೌದ...! ಜಾಣೆ ನೀನು. ಯಾವಾಗಲೂ ಹೀಗೆ ಬಹುಮಾನ ತಗೋಳತಾನೇ ಇರಬೇಕು ನೀನು" ಆಕೆಯನ್ನು ಮುದ್ದಿಸುತ್ತ ಹೇಳಿದ. ಬಹುಮಾನವಾಗಿ ಬಂದ ಚಿಕ್ಕ ಲೋಟಕ್ಕೆ ಅವಳು ಪಡುತ್ತಿರುವ ಖುಷಿ ನೋಡಿ ಶರತ್ಚಂದ್ರನಿಗೂ ಖುಷಿಯಾಯಿತು. " ಹೋಗು, ಅಜ್ಜಿಗೆ ತೋರಿಸು ಹೋಗು"  ಎಂದು ಶರತ್ಚಂದ್ರ ಹೇಳುವುದರೊಳಗಾಗಿ ಶಾಶ್ವತಿ ಕೆಳಗಿಳಿದು ಅಡುಗೆಮನೆಯ ಕಡೆಗೆ ಓಡಿದಳು " ಅಜ್ಜೀ" ಎಂದು ಕೂಗುತ್ತ.         ಶರತ್ಚಂದ್ರ ಆಕೆಯ ಕಡೆಗೇ ನೋಡುತ್ತ ಮನಸ್ಸಿನಲ್ಲಿಯೇ ಅಂದುಕೊಂಡ  " ಎಷ್ಟು ಚುರುಕಿನ ಹುಡುಗಿ. ಸಾವಿರ ಮಾತು ಪಟಪಟ ಆಡ್ತಾನೇ ಇರ್ತಾಳೆ. ಹಾಡು ಶೇಡಿ ಅಂತೇನೇ ಇದ್ರೂ 'ನಾನು ನಾನು' ಅಂತ ಓಡಿ ಬರ್ತಾಳೆ. ಶಾ