ಪೋಸ್ಟ್‌ಗಳು

ಆ ಒಂದು ದಿನ. (ಕಥೆ )

   ಸಣ್ಣ ಧ್ವನಿಯಲ್ಲಿ  ರಿಂಗಣಿಸುತ್ತಿರುವ  ಮೊಬೈಲನ್ನು ತೆಗೆದುಕೊಂಡು ಕಿವಿಗಿಟ್ಟುಕೊಂಡ ಧನಂಜಯ .ರಾತ್ರಿ ಮಲಗಿದ್ದೆ 2 ಗಂಟೆಗೆ. ಕಣ್ಣು ತೆರೆಯಲು  ಮನಸ್ಸು  ಒಪ್ಪುತ್ತಿರಲಿಲ್ಲ.  ಗಾಢ ನಿದ್ದೆಯ ಮಂಪರು ಕಣ್ಣಿನಲ್ಲಿದ್ದರೂ, ಬಂದ ಫೋನು ಯಾರದ್ದೆಂದು ರಿಂಗ್ ಟೋನಿನಿಂದ ಗೊತ್ತಾಯಿತು.       'ಹಲೋ... ಈಗಷ್ಟೇ ಮಲಗಿದ್ದಲ್ವಾ?...ಮತ್ತೆ  ಫೋನಿಗೆ ಬಂದ್ಯಾ......  ನಿಂಗೆ..  ನಿದ್ದೆ....' ನಿದ್ದೆಯ ಸೆಳೆತದಲ್ಲಿ  ಧನಂಜಯ ಮಾತು ಮುಂದುವರೆಸುತ್ತಿರುವಾಗಲೇ  ಅವನ ಮಾತು ತುಂಡರಿಸಿ ಸ್ವಾತಿ ಹೇಳಿದಳು.  ' ನನ್ನ ಮಾತು ಸರಿಯಾಗಿ ಕೇಳಿಸ್ಕೊ. ನಾನು ನಿನ್ ಜೊತೆ  ಮಾಡ್ಕೊಂಡ   ಎಂಗೇಜ್ಮೆಂಟನ್ನ  ಮುರ್ಕೊಳ್ತಾ ಇದೀನಿ. ನಂಗೆ  ನಿನ್ನ  ಮದ್ವೆ ಆಗೋಕೆ ಇಷ್ಟ ಇಲ್ಲ. ನಂಗೆ ಇನ್ಮೇಲೆ ಫೋನ್ ಮಾಡ್ಬೇಡ.  ಕನ್ವಿನ್ಸ್  ಮಾಡೋಕು ಬರ್ಬೇಡ. ಗುಡ್ ಬೈ' ಇಷ್ಟು ಹೇಳುತ್ತಿದಂತೆ ಫೋನ್ ಕಟ್  ಆಯಿತು.ತಕ್ಷಣಕ್ಕೆ  ಏನಾಗುತ್ತಿದೆಯೆಂದೇ  ಗೊತ್ತಾಗಲಿಲ್ಲ  ಧನಂಜಯನಿಗೆ. ಲಗುಬಗೆಯಿಂದ   ಸ್ವಾತಿಯ ನಂಬರ್ಗೆ ಮತ್ತೆ  ಫೋನ್  ಮಾಡಿದ, ಆದರೆ  ಅವಳ ನಂಬರ್ ಸ್ವಿಚ್ ಆಫ್  ಆಗಿತ್ತು. ನಿದ್ದೆಯ ಮಂಪರಿನಲ್ಲಿದ್ದವನ  ನಿದ್ದೆ ಒಮ್ಮೆಲೇ ಹಾರಿಹೋಯಿತು. ಪಕ್ಕದಲ್ಲಿದ್ದ  ಗಡಿಯಾರ ನೋಡಿದ.  ಬೆಳಗಿನ ಆರುಗಂಟೆ. ಮತ್ತೆ ಮತ್ತೆ ಫೋನ್ ಮಾಡಿ ನೋಡಿದನಾದರೂ ಆಕೆಯ  ಫೋನ್  ಸ್ವಿಚ್  ಆಫ್  ಸ್ಥಿತಿಯಿಂದ  ಹೊರ ಬಂದಿರಲಿಲ್ಲ. ಪದೇ ಪದೇ 'ಸ್ವಿಚ್ ಆಫ

ಹೆಮ್ಮೆಯ ಧ್ವಜ

ಇಮೇಜ್
ಬಾನಗಲದಿ ಸ್ವಚ್ಛಂದದಿ  ಹಾರಿದೆ ನನ್ನಯ ಹೆಮ್ಮೆಯ ಬಾವುಟವು ಪಟಪಟ ಸದ್ದಿನ ಬಾವುಟ ಕಾಣಲು ನರನಾಡಿಗೆ ಅದೆ ಹೊಸ ಕಸುವು ಹಲವರ ಕನಸದು ನನಸಾಯಿತು ಸ್ವಾತಂತ್ರ್ಯವ ದೇಶವು ಪಡೆದಂದು ಹರಿಸಿದ ನೆತ್ತರು, ಸುರಿಸಿದ ಬೆವರು ಪಡೆಯಿತು ತಾ ಸಫಲತೆಯಂದು ತ್ಯಾಗದ ತಳಹದಿ ಮೇಲ್ಗಡೆ ಇರುವ ಜೀವನದರ್ಶನ ಇಲ್ಲಿಹುದು ಪರೋಪಕಾರವು, ಪ್ರತ್ಯುಪಕಾರವು  ಅತಿಸಹಜದಿ ನೆಲೆನಿಂತಿಹುದು ಎಷ್ಟು ಆಕ್ರಮಣ ಮತ್ತೆಷ್ಟು ಲೂಟಿಗಳು ನಡೆದವು ಚರಿತ್ರೆ ಪುಟಗಳಲಿ ಎಲ್ಲವ ಮೀರಿಯೆ ನಿಂತಿದೆ ದೇಶವು ಅಳಿವಿಲ್ಲದೆ ಸ್ಥಿರ ರೂಪದಲಿ ಜೀವನದಾಳವ, ಜೀವನ ಧ್ಯೇಯವ ವಿಶ್ವಕೆ ಸಾರಿದ ದೇಶವಿದು ಪ್ರಜ್ಞೆಯ ಸೀಮೆಯ ತುದಿಯನು ಮುಟ್ಟುವ ಸಾರ್ಥಕ ಬಾಳ್ವೆ ಇಲ್ಲಿಯದು ಮರೆತಿರಬಹುದು ಆ ಮಹದಾದರ್ಶವ ಕಾಲನ ಹೊಡೆತಕೆ ತುತ್ತಾಗಿ ಕುಯುಕ್ತಿಯ ಜನಗಳ ಪಿತೂರಿಯರಿಯದೆ ಅಜ್ಞಾನದ ಅಮಲಿಗೆ ತೊತ್ತಾಗಿ ಕಣ್ಣರಳಿಸಿ ನೋಡಲು ಹೆಮ್ಮೆಯ ಧ್ವಜವನು ಹೃದಯವು ತಾನೇ ಅರಿಯುವುದು ಹಲವು ಸಾವಿರದ ವರ್ಷಗಳಿಂದಲಿ  ಪ್ರಕಾಶಿಸುತಿರುವ ದೇಶವಿದು.

ಆ ಕ್ಷಣದ ಕ್ಷಣಗಣನೆ

ಮನದಲಿ ಸ್ವಲ್ವವೆ ಸುಳಿದಾಡು ಹೃದಯದಿ ಸ್ವಲ್ಪವೆ ನಲಿದಾಡು ಮನಸಿನ, ಹೃದಯದ ಸ್ಪಂದನೆಯಿಂದ ನಾ ಪಡೆಯುವೆ ಅಮಿತಾನಂದ ನೀ ಬರಲೇಬೇಕೆನ್ನುವ ಕಾತರ ಎಂದಿಗೆ ಬಂದೀಯೆನ್ನುವ ಆತುರ ಕಾದರು ಬಾರದೆ ಕಾಡುವುದೇತಕೆ? ದೂರದಲೆಲ್ಲೋ ಇರುವುದು ಏತಕೆ? ನಿನ್ನ ಪ್ರವಾಹದ ಧಾರೆಯ ನದಿಗಳು ನನ್ನೊಳು ಉದಯಿಸಿ ನನ್ನನೆ ತೋಯಿಸಿ ಮರುಕ್ಷಣ ಮುಳುಗಿಸಿ ಗಗನಕೆ ಚಿಮ್ಮಿಸಿ ರಮಿಸಿದ ಅವುಗಳೇ ಹೋನ್ನಿನ ದಿನಗಳು ಅಂದಿನ ದಿನಗಳ ಇಂದಿನ ನೆನಪು ಇಂದಿನ ದಿನದವೇ ಆಗುವುದೇ? ಅಂದಿನ ಅವುಗಳು ಇಂದೂ ಆದರೆ ಇಂದಿನ ಈ ಕ್ಷಣ ಹೊನ್ನಾಗದೇ?

ಬೇಕಿದೆ...

ಮಳೆಯ ಹನಿ ಹನಿ ನೀರು ಭುವಿಯ ಒಡಲೊಳು ಇಳಿದು ಇಳೆಯ ಮೇಲ್ಗಡೆಯಲ್ಲಿ ಹುಲುಸಾದ ಹಸಿರು. ಸದ್ವಿಚಾರಗಳೆನ್ನ ಮನದಲ್ಲಿ ಇಳಿದರೆ ಶುಭವ ಮಾಡುವ ಕನಸೆ ನನ್ನ ಜೀವನದ ಉಸಿರು ಜಗವು ನೀಡುವುದೆನಗೆ ನೂರು ಭಾವಗಳನ್ನು ಅವುಗಳಿಂದ ಮನದಿ ನೂರೊಂದು ಅಚ್ಚು ಆ ಅಚ್ಚುಗಳ ಪರಿಣಾಮ ನನ್ನ ಹೃದಯ ತುಂಬ ರೋಷ ಆವೇಷ, ಕೆಚ್ಚು ರೊಚ್ಚು. ಇಂತ ಕಸ ಕಡ್ಡಿಗಳು ಬೇಡ ಜೀವನದಲ್ಲಿ ಮನಕೆ ಬೇಕಿದೆ ಶಾಂತಿ, ಜೊತೆಗೆ ವಿಶ್ರಾಂತಿ ಕೊಳಕು ಕೊಚ್ಚೆಯ ಕಳೆದು ಪರಿಶುದ್ಧ ಚಿತ್ತದಲಿ ಚಿಮ್ಮಿ ಹೊಮ್ಮಲಿ ನನ್ನ ಪರಿಶುದ್ಧ ಕಾಂತಿ ಇದನೆಲ್ಲ ಅರುಹಿದವ ನೀನಲ್ಲವೆ? ಮತ್ತಾರ ಬಳಿ ಇದನು ಬೇಡಲಾರೆ ಹೇಳಿದವ ನೀನು, ತಿಳಿದವನು ನೀನು ನೀಡಬೇಕಿದನೆನಗೆ ನೀನೆ ಗುರುವೇ.....

ಕೃತಘ್ನನ ಕೃತಜ್ಞತೆ.

ಇಮೇಜ್
          ನಿ:ಶಕ್ತಿಯಿಂದ ಮುಂದೆ ಹೆಜ್ಜೆಯಿಡಲಾರದೆ  ಸುಸ್ತಾಗಿ ಮರಕ್ಕೆ  ಒರಗಿ ನಿಂತ ವೃದ್ಧನಂತೆ ಕಾಣುತ್ತಿರುವ ಈ ಸೈಕಲ್  ನೆಪಮಾತ್ರಕ್ಕಷ್ಟೇ ಬದುಕಿಕೊಂಡಿದೆ. ಜೀವನದುದ್ದಕ್ಕೂ ದುಡಿದು ದಣಿದ, ದುಡಿಮೆಯಾಚೆಗೆ ಜೀವನವನ್ನೇ ಕಾಣದೆ  ಜೀವನದ ಕೊನೆಯಲ್ಲಿ ಯಾರಿಗೂ ಬೇಡವಾಗಿ, ಕಣ್ಣೆದುರಿದ್ದೂ ಎಲ್ಲರಿಂದಲೂ ಉಪೇಕ್ಷೆಗೊಳಗಾದ ವ್ಯಕ್ತಿಯ ಪರಿಸ್ಥಿತಿ ಅದರದ್ದು. ವೃದ್ದಾಪ್ಯದಲ್ಲಿ ತಂದೆತಾಯಂದಿರನ್ನು ಕಡೆಗಣಿಸಿ ಭಂಡತನದಿಂದ ಓಡಾಡಿಕೊಂಡಿರುವ ಮಕ್ಕಳಂತೆ ಸೈಕಲ್ಲಿನ ಈ ಪರಿಸ್ಥಿತಿಯನ್ನು ಕಂಡೂ ಕಾಣದಂತೆ ಇರುವ ಜಗಭಂಡ ನಾನು.  ತನ್ನ ಜೀವನವನ್ನು ನನಗಾಗಿಯೇ ಸವೆಸಿದ ಆ ಸೈಕಲ್ಲಿನ ಬಗ್ಗೆ ಯಾವ ಕೃತಜ್ಞತೆಯನ್ನೂ ತೋರದೆ ನಿರ್ಲಜ್ಜನಾಗಿ ಬದುಕುತ್ತಿದ್ದೇನೆ. ಇಂದು ನನ್ನ ಕಾಲಮೇಲೆ ನಾನು ನಿಂತಿದ್ದೇನೆ. ಆದರೆ ಒಂದಾನೊಂದು ಕಾಲದಲ್ಲಿ ನನ್ನ ಸಂಪೂರ್ಣ ಭಾರವನ್ನು ತಾನು ಹೊತ್ತು ನನ್ನನ್ನು ಮುನ್ನಡೆಸಿದ್ದು ಈ ಸೈಕಲ್ !   ಸರಿಯಾಗಿ  ೧೬ ವರ್ಷಗಳ ಹಿಂದೆ ಈ ಸೈಕಲ್ ನನ್ನ ಬಾಳಿನಲ್ಲಿ ಪ್ರವೇಶಿಸಿತು‌. ನಾನು ಆಗ ಸಿದ್ದಾಪುರದ ಎಂ ಜಿ ಸಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದೆ. ಮನೆಯಿಂದ ತಾಳಗುಪ್ಪದ ವರೆಗೆ ಸೈಕಲ್ ತುಳಿದು ಅಲ್ಲಿಂದ ಬಸ್ಸಿನ ಪ್ರಯಾಣ. ಮನೆಗೆ ವಾಪಾಸಾಗುವುದೂ ಕೂಡ ಇದೇ ರೀತಿಯಲ್ಲಿ. ಒಟ್ಟಾರೆ ೧೦ ಕಿಮಿಯ ಸೈಕಲ್ ಸವಾರಿ ನನ್ನ ಪ್ರತಿನಿತ್ಯದ ಪಾಡಾಗಿತ್ತು. ಮೊದಲು ಒಂದು ಸೈಕಲ್ ಇದ್ದರೂ, ಅದು ನನಗೆ ಗಿಡ್ಡವಾಗಿದ್ದರಿಂದ ಬೆನ್ನು

ಏಕಮೇವ ಕೋರಿಕೆ.

ಇಮೇಜ್
ಸುಖ ಬರುವುದು, ನಲಿವಿರುವುದು ಸಂತೋಷತಾನೆ...! ಅದರ ಜೊತೆಜೊತೆಯೇ ಕಷ್ಟವೂ ಬರಲಿ, ನೋವೂ ಬರಲಿ ಬರಬೇಕಾದುದೆಲ್ಲವೂ ಬಂದೇ ಬರಲಿ ಅದು ಸಹಜವೇನೇ...! ಆದರೆ ನೀ ಎನ್ನ ತೊರೆವ ಕ್ಷಣ, ಕೈ ಬಿಟ್ಟು ನಡೆವ ಕ್ಷಣ, ತಿರುಗಿ ಸ್ವಲ್ಪವು ಎನ್ನ ನೋಡದೆ ಇರುವ ಕ್ಷಣ.... ಶ್ರೀಗುರುವೇ... ಅದು ಮಾತ್ರ ಎಂದಿಗೂ ಬಾರದಿರಲಿ! ಆ ದಿನವ ಈ ಬಾಳು ಕಾಣದಿರಲಿ.!!

ಮುಳುಗಡೆಯಾಗದ ನೆನಪುಗಳು...

ಇಮೇಜ್
        ನಿನ್ನೆ ಅಂದರೆ 17/04/2018ರಂದು ಬರಬಳ್ಳಿಗೆ ಹೋಗಿ ಬಂದೆ. ಬಹಳ ದಿನಗಳಿಂದ ಹೋಗಬೇಕು ಅಂತ ಅಂದ್ಕೊಂಡಿದ್ರೂ ನಿನ್ನೆ ಅವಕಾಶ ಆಯ್ತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ದಟ್ಟ ಕಾಡುಗಳ ನಡುವೆ ಇದ್ದ ಪುಟ್ಟ ಹಳ್ಳಿ ಬರಬಳ್ಳಿ, ನನ್ನ ಅಮ್ಮನ ತವರೂರು. ಆ ಬರಬಳ್ಳಿಯಲ್ಲೇ ನಾನು ಹುಟ್ಟಿದ್ದು. ಬಾಲ್ಯದ ದಿನಗಳಲ್ಲಿ ಬೇಸಿಗೆ ರಜಾ ಬಂದೊಡನೆ ಅಮ್ಮನೊಂದಿಗೆ ಹೋಗಿ ನಲಿದಾಡುತ್ತಿದ್ದ ಸ್ವರ್ಗ ಅದು. ಕಾಳಿ ನದಿಯ ದಡದ ಉದ್ದಗಲಗಳಲ್ಲಿ ಹರಿಡಿಕೊಂಡಿದ್ದ ಊರು ಬರಬಳ್ಳಿ. ವನದೇವತೆಯ ಅಧಿಕೃತ ಆವಾಸ ಎನ್ನುವಂತಿದ್ದ ಆ ಕಗ್ಗಾಡಿನ ಊರಿನಲ್ಲಿ ಚದುರಿಕೊಂಡಿದ್ದ ಅಡಿಕೆ ಹಾಗೂ ತೆಂಗಿನ ಮರಗಳ ಹೊರತಾಗಿ ಉಳಿದ ಮರಗಳೆಲ್ಲ ನೈಸರ್ಗಿಕವಾಗಿಯೇ ಬೆಳೆದುಕೊಂಡಿದ್ದವು. ಉಳಿದೆಲ್ಲ ಮರಗಳು ಎಂದರೆ- ಹಲಸು, ಮಾವು, ಬಾಳೆ, ಸಪೋಟ, ಸೀತಾಫಲ, ಪೇರಲ ,ಪನ್ನೇರಲ, ನೇರಲ ಹೀಗೆ ಕಂಡು ಕೇಳಿದ ಹಣ್ಣುಗಳೆಲ್ಲ  ಬೇಕಾಬಿಟ್ಟಿ ಸಿಗುತ್ತಿದ್ದ ಊರದು. ಇವತ್ತು ಬೆಂಗಳೂರಿನಂತಹ ನಗರಗಳಲ್ಲಿ ಹಲಸಿನ ಸೊಳೆಯೊಂದಕ್ಕೆ ಐದೂ ಆರೋ ರೂಪಾಯಿ ಕೊಡಬೇಕಾಗಿರಬಹುದು . ಆದರೆ ಬರಬಳ್ಳಿಯಲ್ಲಿ ಹಲಸು ತಿಂದು ಮಿಕ್ಕಿ ಕೊಳೆತು ಹೋಗುವುದು ಅತ್ಯಂತ ಸಹಜವಾಗಿತ್ತು. ಹಲಸೊಂದೇ ಅಲ್ಲ. ಎಲ್ಲ ಹಣ್ಣುಗಳ ಕತೆಯೂ ಹೀಗೆಯೇ!. ಹಪ್ಪಳ ,ಪಾಯಸ, ಉಕಡಾಪು, ಹುಳಿ, ಪಲ್ಯ, ಉಪ್ಪಿನಕಾಯಿ, ಗೊಜ್ಜು ಮತ್ತೊಂದು ಮಗದೊಂದು ಹೀಗೆ ಅಡುಗೆಯಲ್ಲೆಲ್ಲ ಹಲಸು, ಮಾವು, ಬಾಳೆಕಾಯಿಗಳದ್ದೇ ಕಾರುಬ