ಪೋಸ್ಟ್‌ಗಳು

ನಮ್ಮ ಶಾಸ್ತ್ರೀಜಿ. ...

ಇಮೇಜ್
ವಾಮನ ಶರೀರದಲಿ ಅಪರಿಮಿತ ಧೀರ ಭಾರತದ ವರಪುತ್ರ ಲಾಲ ಬಹದ್ದೂರ. ಸರಳತೆಯೆ ಉಸಿರಾಗಿ, ಸಜ್ಜನಿಕೆ ಹೆಸರಾಗಿ ಜನರ ಮನಮಂದಿರದಿ ನೆಲೆ ನಿಂತೆ ನೀನು ವೈಭೋಗವಿಲ್ಲದಿಹ ತ್ಯಾಗ ಜೀವನದಲ್ಲಿ ವೈಭವದಿ ಮೆರೆದಂತ ನಿಜಯೋಗಿ ನೀನು ಪೀಚು ಪೀಚಾಗಿರುವ ನೀನೆಂತ ವ್ಯಕ್ತಿ? ಮೈತಳೆದು ಬಂದಿರುವ ನಿಜ ದೇಶ ಭಕ್ತಿ! ಹೊರಗಣ್ಣಿನಲಿ ನೀನು ತುಂಬ ನಿಃಶಕ್ತ ಅಂತರಂಗದಲೆಂಥ ಅಪರಿಮಿತ ಶಕ್ತ! ನಿನ್ನ ಕಾಯವ ನೋಡಿ,ಮನದಿ ಕುಹಕವ ಮಾಡಿ ನಿನ್ನ ವಿನಯವ ನೋಡಿ, ಆಡಿಕೊಂಡರು ಕೂಡಿ ಮುಟ್ಟಿಕೊಳಬೇಕಾಯ್ತವರು ತಮ್ಮನ್ನೆ ತಾವು ಅರಿತುಕೊಂಡರು ಕೊನೆಗೆ ಮಂದಮತಿಗಳಾಗಿಹೆವು. ದೌರ್ಭಾಗ್ಯ ನಮ್ಮಯ ಹೆಗಲೇರಿ ಬಂತು ಆ ದಿನವೆ ತಾಷ್ಕೆಂಟಿನಲಿ ಸಹಿಯು ಬಿತ್ತು ಏನಾಯ್ತು? ಯಾಕಾಯ್ತು? ಗೊತ್ತಾಗದಂತೆ ಆ ರಾತ್ರಿ ನೀ ತೊರೆದೆ ಈ ಜಗದ ಸಂತೆ ನನ್ನ ಸ್ಮರಣೆಯ ಪುಟದಿ ಚಿರ ನೆನಪು ನೀನು ಉಸಿರಿರುವವರೆಗೆ ನಾ ನಿನ ಮರೆವೆನೇನು? ದೀಪದಂತಿಹೆ ನೀನು ಭರತಮಾತೆಯ ಗುಡಿಗೆ ಶಿರ ಬಾಗಿ ನಮಿಸುವೆನು ಶಾಸ್ತ್ರಿ ನಿನ್ನಡಿಗೆ.

'ಅಗ್ನಿ'ಜ್ವಾಲೆ ಅನಂತದೆಡೆಗೆ

ಇಮೇಜ್
ಕ್ಷಣ ಕ್ಷಣವು ಉರಿದುದುರಿದು ಪ್ರಖರತೆಯ ಸಿರಿ ಬಿರಿದು ಧಗಧಗಿಸಿ ಉರಿಯುತ್ತಲುರಿಯುತ್ತಲೆ ಸಾಗಿ ಹೋಯಿತು ಅಗ್ನಿಜ್ವಾಲೆ ಅನಂತದೆಡೆಗೆ ! ರಾಷ್ಟ್ರ ಕೀರ್ತಿಯ ವಿಶ್ವದಂಚಂಚಿಗೆ ಹರಡಿ ರಾಷ್ಟ್ರ ರಾಷ್ಟ್ರಗಳಿಗೆ  ತನ್ನ ನೆಲದ ಬಲವನು ತೋರಿ ರಾಷ್ಟ್ರದೇಳಿಗೆಯ ಮಂತ್ರ ಪಠಿಸುತ್ತ ಜಪಿಸುತ್ತ ಬಿಸಿ ಕಾವು ಉಳಿಸಿ ಸಾಗಿ ಹೋಯಿತು ಅಗ್ನಿ ಜ್ವಾಲೆ ಅನಂತದೆಡೆಗೆ ! ತೋರುವುದು ಯಾವುದೂ ತಡೆಗೋಡೆಯಲ್ಲ ಪರಿಶ್ರಮ ಸೀಳುವುದು ತಡೆಗೋಡೆಯೊಡಲ ಒಳಿತಿನ ಹಂಬಲವೆ ಜೀವನದ ಕೀರ್ತಿ ಎಲ್ಲರಲಿ ಒಲವೇ ಜೀವನಕೆ ಸ್ಪೂರ್ತಿ ಎಂಬುದನು ತಿಳಿಸಿ ಸಾಗಿ ಹೋಯಿತು ಅಗ್ನಿಜ್ವಾಲೆ ಅನಂತದೆಡೆಗೆ !                  ಕಾಶ್ಮೀರದಂಚಿಂದ ಕನ್ಯಾ ಕುಮಾರಿ ಹಂಬಲಿಸಿ ಹಂಬಲಿಸಿ ಕಂಬನಿಯ ಬೀರಿ ಸೂತಕದ ಯಾತನೆಯ ಪಡುವಂತೆ ಮಾಡಿ ನುಡಿ ನುಡಿವ ಮುನ್ನವೇ ಸಾಗಿ ಹೋಯಿತು ಅಗ್ನಿಜ್ವಾಲೆ ಅನಂತದೆಡೆಗೆ !

ದುರ್ಗಾಸ್ತಮಾನ:ಅಸ್ತಮಿಸಿದ ದುರ್ಗದಲ್ಲಿ ಉದಯಿಸಿದ ಕೃತಿಸೂರ್ಯ

ಇಮೇಜ್
             ಇತಿಹಾಸವೇ ಹಾಗೆ; ಸತ್ಯದ ಸುತ್ತಲೂ ಹಲವಾರು ಅಂತೆ ಕಂತೆಗಳು, ಉದ್ದೇಶ ಪೂರ್ವಕ ತಿರುಚುಗಳು, ತಪ್ಪಾಗಿ ಅರ್ಥೈಸಿ ಮಾಡಿದ ಅನರ್ಥಗಳು ಇವೆಲ್ಲ ಗುರುತಿಸಲು ಆಗದಷ್ಟು ಕರಗಿ ಒಂದಾಗಿ ಇತಿಹಾಸವೊಂದು ರಚನೆಯಾಗಿರುತ್ತದೆ. ಇತಿಹಾಸದ ಅಧ್ಯನಯನದ ಹೆಸರಿನಲ್ಲಿ ಇದನ್ನೇ ನಾವು ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುತ್ತಿರುತ್ತೇವೆ. ಆ ನಂತರ ಹೀಗೆಲ್ಲ ಒಂದುಗೂಡಿದ ಅಂಶಗಳನ್ನು ಪ್ರತ್ಯೇಕಿಸುತ್ತಾ, ಅಧ್ಯಯನ ನಡೆಸುತ್ತಾ ವಾದ ವಿವಾದ ಮಾಡುತ್ತ,ಚರ್ಚೆ ನಡೆಸುತ್ತ ವಿದ್ವಾಂಸರೆನಿಸಿಕೂಂಡವರು ತಮ್ಮ ಅಸ್ತಿತ್ವವನ್ನು ಸಾಬೀತು ಮಾಡುತ್ತಲೇ ಇರುತ್ತಾರೆ. ಐತಿಹಾಸಿಕ ಘಟನೆಗಳಿಗೆ ಕಾರಣರಾದವರಷ್ಟೆ ನಿಜವಾದದನ್ನು ಕಣ್ಣೆದುರಿಗಿರಿಸಬಲ್ಲರು. ಆದರೆ ಅವರೇ ಕಣ್ಣೆದುರಿಗಿಲ್ಲವೆಂದಾದಾಗ ಅವರೊಡನೆ ವಾಸ್ತವವೂ ಮರೆಯಾಗಿ ಕಲ್ಪನೆಗಳನ್ನೇ ವಾಸ್ತವವಾಗಿಸುವ ನಿರಂತರ ಪ್ರಯತ್ನಗಳು ಹೊಟ್ಟೆಪಾಡಾಗಿ ನಡೆಯುವುದು ತಪ್ಪಿಸಲು ಸಾಧ್ಯವಿಲ್ಲವೇನೋ.              ವಿಷಯ ಹೀಗಿದ್ದರೂ ಕೆಲವರು  ಇತಿಹಾಸದ ಯಾವುದೋ ಘಟನೆಯಿಂದ ಪ್ರಭಾವಿತರಾಗಿ, ಅದನ್ನು ತಮ್ಮ ಹೃದಯದಲ್ಲಿ ಧರಿಸಿ, ಇರುವ ದಾಖಲೆ ಸಾಕ್ಷಿಗಳನ್ನು ಪರಿಶೀಲಿಸಿ ನಿಜವನ್ನು ಪ್ರಕಟಪಡಿಸಲು ಹೆಣಗುತ್ತಿರುತ್ತಾರೆ. ಹೀಗೆ ಸತ್ಯವನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಪಡಿಸುವುದರ ಹಿಂದೆ ಆಳವಾದ ಪ್ರಯತ್ನ ಬೇಕಿರುವಾಗ , ಇತಿಹಾಸದ ಮಗ್ಗುಲೊಂದನ್ನು ಕಾದಂಬರಿಯ ರೂಪದಲ್ಲಿ ತರುವುದು ಅದಿನ್ನೆಷ್ಟು ಕಠಿಣ!....

ಆಹ್ವಾನ

 ಹರಿವ ನದಿಯ ದಾರಿಯಲ್ಲಿ  ಕಲ್ಲು ಮುಳ್ಳು ಏನೆ ಇರಲಿ  ಎಲ್ಲ ಮೀರಿ ಸೇರುವುದು ಸಾಗರವನ್ನು  ಜೀವನದಲಿ ನೂರು ನೋವು  ಕಷ್ಟ ನಷ್ಟ ಏನೇ ಇರಲಿ  ನಾನು ಕೂಡ ನಿಲ್ಲದಂತೆ ಸಾಗುತಿರುವೆನು  ಜನಿಸಿದ ಪ್ರತಿ ಜೀವಿಗಿಲ್ಲಿ  ನೋವು ಕಷ್ಟ ದುಃಖ ಸಹಜ  ಅದರ ಜೊತೆಯೆ ನೂರು ನಲಿವು ತೇಲಿ ಬರುವುದು  ಈ ಪಯಣದ ಸಾರ್ಥಕತೆಗೆ  ಇಲ್ಲಿರುವ ಉಪಾಯ ಒಂದೆ  ಬಾಳಿನ ಪುಟ ಪುಟಗಳಲ್ಲಿ ಒಲವ ತರುವುದು!  ನಾನು ಇಲ್ಲಿ ಸಾಗುತಿರುವೆ ಒಂಟಿಯಾಗಿ ದಾರಿಗುಂಟ  ನೀನು ಬರುವೆಯೇನು ನನ್ನ ಬಾಳ ಪಥದಲಿ?  ನನ್ನ ನಿನ್ನ ನೋವು ನಲಿವು  ಬೇರೆ ಬೇರೆ ಅಲ್ಲ ಮುಂದೆ  ನಮ್ಮದಾಗಿ ಸ್ವೀಕರಿಸಿ ನಡೆವ ಜೊತೆಯಲಿ....

ಒಳಗುಟ್ಟು......

ಆ ಅಮೃತ ಬಿಂದು ಮುಗಿಲಿಂದ ಬಂದು ಇಳೆ ಒಡಲ ಸೇರಿ ಹೋಯ್ತು. ಬೆಂದೊಡಲ ತಾಕಿ ದೈನ್ಯವನು ನೂಕಿ ಎಲ್ಲೆಲ್ಲವು ಹಸಿರಾಯ್ತು. ಇದು ಎಂಥ ನೀತಿ? ವೈಚಿತ್ರ್ಯ ರೀತಿ! ಹಸಿರಲ್ಲ ನೀರ ಬಣ್ಣ. ಭುವಿಯಿಂದ ಮಾತ್ರ ಚಿಗುರುವುದು ಹಸಿರು ತುಂಬುವುದು ನನ್ನ ಕಣ್ಣ. ಇರಬಹುದು ಹೀಗೆ, ಜಲಧಾರೆ ತಾನು ಇಳೆ ತಬ್ಬಿ ಹಬ್ಬಿದಾಗ, ಒಳಗೊಳಗೆ ಪುಳಕಗೊ ಳ್ಳುತಲಿ ಭುವಿಯು ಹಸಿರನ್ನೇ ಹೇರುವುದಾಗ. ಜಲವೇ ಒಂದು ನೆಲೆ ,ಭುವಿಯೇ ಬೇರೆ ಸೆಲೆ ಭಿನ್ನ ಒಂದು ಮತ್ತೊಂದರಿಂದ. ಹೊಸ ಜೀವವೊಂದು ಹೊಮ್ಮುವುದು ಇಲ್ಲಿ ಪ್ರೇಮಪೂರ್ಣ ಸಮ್ಮಿಲನದಿಂದ.

ಯಾರೂ ಓದದ ಪುಸ್ತಕ.

ರಾಶಿ ರಾಶಿ ಪುಸ್ತಕಗಳ ನಡುವೆ , ಪ್ರತೀ ಪುಸ್ತಕ ಪ್ರದರ್ಶನದಲ್ಲೂ ಕಾಣಿಸಿಕೊಳ್ಳುವ ಆ ಪುಸ್ತಕ . ಯಾರೊಬ್ಬರೂ ಪುಟ ತಿರುಗಿಸದೆ , ಬಂದಂತೆ , ತಂದಂತೆ , ಇದ್ದು ಎದ್ದು ಹೋಗುವ , ಯಾರೂ ಓದದ ಪುಸ್ತಕ . ಗರ್ಭದಿಂದ ಜೀವವೊಂದು ಜಾರುವಂತೆ , ಮುದ್ರಣಗೊಂಡು ಅದು ಬಂದದ್ದು ' ಪುಸ್ತಕಲೋಕ '. ದಪ್ಪವೆನಿಲ್ಲ , ಬಣ್ಣ ಚಿತ್ತಾರಗಳೂ ಇಲ್ಲ ಎಂದು ಹೇಳಲು ಓದಿದವರಾರೂ ಇಲ್ಲ . ಮಾಸಲು ಬಣ್ಣಕ್ಕೆ ತಿರುಗಿದ ಪುಸ್ತಕದ ಒಳ ಪುಟಗಳು ಹೇಗಿವೆಯೋ ಗೊತ್ತಿಲ್ಲ . ಸದ್ದು ಗದ್ದಲವಿಲ್ಲದೆ ಬಂದು ಕುಳಿತ ಅದು ಹೋದದ್ದೂ ಗೊತ್ತಿರುವುದಿಲ್ಲ . ಯಾವ ದೊಡ್ಡ ದೊಡ್ಡ ಹೆಸರುಗಳೂ ಕಾಣುವುದಿಲ್ಲ . ಚುಚ್ಚುಮದ್ದು ಹಾಕಿಸಿಕೊಳ್ಳದ ಮಗುವಿನಂತೆ ಕಿಲಕಿಲ ನಗುತ್ತಿರುತ್ತದೆ . ರೋಗಗ್ರಸ್ತ ವದ್ಯರು ಗಮನಿಸಿರುವುದಿಲ್ಲ . ನಾನು ಆ ಪುಸ್ತಕವನ್ನೇ ಆಯ್ದುಕೊಳ್ಳುತ್ತೇನೆ . ನುಡಿಯಲು ಅದಕ್ಕೂ ಸಾವಿರ ಮಾತುಗಳಿರುತ್ತವೆ . ನನ್ನಲ್ಲೂ ತೆರೆದೊಂದು ಹೃದಯವಿರುತ್ತದೆ . ಮುಂದೆಂದಾದರೂ ಅದು ಕಾಲ್ತುಳಿತಕ್ಕೆ ಸಿಕ್ಕೀತು ಎನ್ನುವ ಭಯದಿಂದ , ತಕ್ಷಣ ಎತ್ತಿಕೊಳ್ಳುತ್ತೇನೆ .

ಕಳೆದು ಹೋಗದಂತೆ.

24ನೇ ತಾರೀಕು ಅಯೋಧ್ಯೆಯ ವಿವಾದದ ಬಗ್ಗೆ ಅಲಹಾಬಾದ್ ನ್ಯಾಯಾಲಯ ತನ್ನ ತೀರ್ಪನ್ನು ನೀಡಲಿದೆ. ಅರವತ್ತು ವರ್ಷಗಳಷ್ಟು ಹಿಂದಿನ ವಿವಾದವೊಂದು ಇಡೀ ಭಾರತವನ್ನೆ ತನ್ನತ್ತ ಸೆಳೆಯುತ್ತಿದೆ. ತೀಪರ್ು ಯಾರ ಕಡೆಗೆ ಬರಬಹುದು ಎನ್ನುವ ಕುತೂಹಲಕ್ಕಿಂತ, ಏನೇ ತೀಪರ್ು ಬಂದರೂ ಹಿಇಂಸಾಚಾರ ತಪ್ಪಿದ್ದಲ್ಲ ಎನ್ನುವ ಸತ್ಯ ಜನರನ್ನು ಚಿಂತಿತರನ್ನಾಗಿಸಿದೆ. ಭಾರತದ ಸುಪ್ರಸಿದ್ದ ಮಹಾಕಾವ್ಯ ರಾಮಾಯಣದ ಕೇಂದ್ರಬಿಂಧು ಶ್ರೀ ರಾಮನ ಜನ್ಮಸ್ಥಳ ಅಯೋಧ್ಯೆ. ಆ ಅಯೊಧ್ಯೆಯಲ್ಲಿ ಶ್ರೀ ರಾಮಮಂದಿರವೊಂದಿತ್ತು. ಕಾಲಾನಂತರ ಮುಘಲ್ ದೊರೆ ಬಾಬರ್, ಮುಸ್ಲಿಂ ಫಕೀರನೊಬ್ಬನ ಆಸೆಯಂತೆ ಆ ಮಂದಿರವನ್ನು ನಾಶ ಮಾಡಿ, ಅಲ್ಲಿ ಮಸೀದಿಯೊಂದನ್ನು ನಿಮರ್ಿಸಿದ. ಆ ಜಾಡಿನಲ್ಲೆ ಸಾಗಿ ಡಿಸೆಂಬರ್-1992ರಲ್ಲಿ ಕಾರಸೇವಕರು ಆ ಬಾಬರೀ ಮಸೀದಿಯನ್ನು ಧ್ವಂಸಗೊಳಿಸಿದ. ಇದು ಇಲ್ಲಿಯವರೆಗೆ ತಿಲಿದಿರುವ ಸಂಕ್ಷಿಪ್ತ ಇತಿಹಾಸ. ನನಗನ್ನಿಸುತ್ತದೆ, ವಂಶವಾಹಿಗಳ ಮೂಲಕ ಸಾಮುದಾಯಿಕ ಭಾವನೆಗಳೂ ತಲೆಮಾರಿನಿಂದ ತಲೆಮಾರಿಗೆ ವಗರ್ಾವಣೆಯಾಗುತ್ತದೆ.ಬಾಬರ್ನ ಕೃತ್ಯದ ಪರಿಣಾಮವಾಗಿ ಜನರಲ್ಲಿ ಹುಟ್ಟಿದ ದ್ವೇಷ ಐದುನೋರು ವರ್ಷಗಳ ನಂತರ ಮಸೀದಿಯ ಧಂಸಕ್ಕೆ ಕಾರಣವಾಯಿತು. ಹಾಗೆಯೇ ಮಸೀಧಿ ಧ್ವಂಸದ ಪರಿಣಾಮ ಇನ್ನೆಲ್ಲಿಗೆ ಸಾಗುತ್ತದೆ? ಇನ್ನೊಂದು ದಿನ ಅದು ವ್ಯಕ್ತಗೊಳ್ಳಲೇಬೇಕು. ಇನ್ನೊಂದು ದಿನ ಅದು ವ್ಯಕ್ತಗೊಳ್ಳುವುದು ಧ್ವಂಸ ಮಾಡುವ ಮೂಲಕವೆ. ಇಂತಹ ಅರ್ಥಹೀನ